ಚಳ್ಳಕೆರೆ :ತಾಲ್ಲೂಕಿನ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮತ್ತು ಬಿ.ಎಫ್.ಟಿ ಹಾಗೂ ಜಿ.ಕೆ.ಎಂ. ಗಳಿಗೆಕಳೆದ 6 ತಿಂಗಳುಗಳಿಂದ ವೇತನ ಪಾವತಿಯಾಗದೆ ವಿಳಂಬ ಆಗಿರುವ ಬಗ್ಗೆ ಮತ್ತು ಮೇಲಿನ ಎಲ್ಲಾ ನೌಕರರುಗಳಿಗೆ ಅಪಘಾತ ವಿಮೆ ಮತ್ತು ಸಾಮೂಹಿಕಕುಟುಂಬ ಆರೋಗ್ಯ ವಿಮಾ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಶಿಪಾರಸ್ಸು ಮಾಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್ ಶಶಿಧರ್ ರವರಿಗೆ ತಾಲ್ಲೂಕು ತಾಂತ್ರಿಕ ಅಧಿಕಾರಿ ದಿನೇಶ್ ಹಾಗೂ ಬಿಎಪ್ ಟಿಗಳು ಮನವಿ ಸಲ್ಲಿಸಿದರು
ಅವರು ನಗರದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ತಾಲೂಕು ಪಂಚಾಯಿತಿ ಇಓ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರುಕರ್ನಾಟಕ ರಾಜ್ಯ ನರೇಗಾ ನೌಕರರಕ್ಷೇಮಾಭಿವೃದ್ಧಿ ಸಂಘದ ಸಭೆಯ ನಡಾವಳಿ ಪ್ರಕಾರ ಹಾಗೂ ಕರ್ನಾಟಕ ಬೇರ್ ಫೂಟ್ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘದ ಸಭೆಯ ನಡಾವಳಿ ಮೂಲಕಮಹಾತ್ಮಾಗಾಂಧಿ…
