ಚಳ್ಳಕೆರೆ :
ಚಿತ್ರದುರ್ಗ: ನರೇಗಾ ಯೋಜನೆ ಕಾಮಗಾರಿ ಕಳಪೆ
ತನಿಖೆಗೆ ಒತ್ತಾಯ
MNREGA ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು
ಕಳೆಪೆಯಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು
ಕ್ರಮ ಕೈಗೊಳ್ಳಲು ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯದರ್ಶಿ
ಸುರೇಶ್ ಚಿತ್ರದುರ್ಗ ಜಿ ಪಂ ಸಿಇಓಗೆ ಗುರುವಾರ ಮನವಿ
ಸಲ್ಲಿಸಿದ್ದಾರೆ.
ವಿವಿಧ ರಸ್ತೆ ಕಾಮಗಾರಿ ಮಾಡಿದ್ದು, ಮಳೆಗೆ ಕೆಸರು
ಗದ್ದೆಯಾಗಿವೆ. ಕಾಮಗಾರಿಗೆ ತಲಾ 4. 90 ಲಕ್ಷ ವೆಚ್ಚ ತೋರಿಸಿದೆ.
ಕಾಮಗಾರಿಗಳ ಬಿಲ್ ತಡೆಹಿಡಿದು ತಪ್ಪಿತಸ್ಥರು, ಗ್ರಾಪಂ ಅಧ್ಯಕ್ಷರ
ವಿರುದ್ಧ ಶಿಸ್ತು ಕ್ರಮಕ್ಕೆ ಸುರೇಶ್ ಆಗ್ರಹಿಸಿದ್ದಾರೆ.

