filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;

ಚಳ್ಳಕೆರೆ : ಕರ್ಣಾಟಕ ಬ್ಯಾಂಕ್ ನ 12ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ : ತುಮಕೂರು ಉಪ ಪ್ರಾದೇಶಿಕ ಮುಖ್ಯಸ್ಥರಾದ ಸುದೀಂದ್ರ ಪಂಚಮುಖಿ ಸಂತಸ

ಚಳ್ಳಕೆರೆ : ಕರ್ಣಾಟಕ ಬ್ಯಾಂಕಿನಲ್ಲಿ ಕಳೆದ ವರ್ಷ 104 ಕೋಟಿ ವ್ಯವಹಾರ ನಡೆಸಲಾಗಿತ್ತು ಪ್ರಸ್ತುತ 115 ಕೋಟಿ ವ್ಯವಹಾರ ನಡೆಸಲು ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ಣಾಟಕ ಬ್ರಾಂಚ್ ನ ತುಮಕೂರು ಉಪ ಪ್ರಾದೇಶಿಕ ಮುಖ್ಯಸ್ಥರಾದ ಸುದೀಂದ್ರ ಪಂಚಮುಖಿ ಹೇಳಿದರು

ಅವರು ನಗರದ ಬಳ್ಳಾರಿ ರಸ್ತೆಯಲ್ಲಿ ಇರುವ ಕರ್ಣಾಟಕ ಬ್ಯಾಂಕ್ ನ 12 ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕೆಕ್ ಕತ್ತರಿಸಿ ಮಾತನಾಡಿದರು,

ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಮ್ಮ ಬ್ಯಾಂಕ್ ಪ್ರಸ್ತುತ ಒಂದು ಸಾವಿರ ಬ್ರಾಂಚ್ ಪ್ರಾರಂಭಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ, ಈ ಬ್ಯಾಂಕಿನ ಪ್ರತಿ ವರ್ಷ ಗ್ರಾಹಕರ ಸಂಖ್ಯೆ ಹೆಚ್ಚಳವಾಗುತ್ತಿದೆ ಗ್ರಾಹಕರ ಸಹಕಾರ ಹೀಗೆ ಸದಾ ಮುಂದುವರಿಯಲಿ, ಬ್ಯಾಂಕ್ ನಲ್ಲಿ ಸುಮಾರು 68 ಕೋಟಿ ರೂಪಾಯಿಗಳನ್ನು ವಿವಿಧ ರೀತಿಯಲ್ಲಿ ಗ್ರಾಹಕರು ಹೂಡಿಕೆ ಮಾಡಿದ್ದಾರೆ.

ಇನ್ನು 40 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕರ ಡೆಪಾಸಿಟ್ ಹಣ ನಮ್ಮ ಬ್ಯಾಂಕಿನಲ್ಲಿ ಇದೆ, ಬ್ಯಾಂಕಿನಲ್ಲಿ ವಿವಿಧ ಸೌಲಭ್ಯಗಳಾದ ಮನೆ ನಿರ್ಮಿಸಿಕೊಳ್ಳಲು, ಕಾರು ಖರೀದಿಸಲು, ಹಾಗೂ ಬಿಸಿನೆಸ್ ಸಾಲ, ಜಮೀನಿನ ಮೇಲೆ ಹಾಗೂ ಭೂಮಿ ಖರೀದಿಗೆ ಸಾಲ ಹೀಗೆ ಎಲ್ಲಾ ವರ್ಗದ ಎಲ್ಲಾ ಹಂತದ ಜನರಿಗೂ ಬ್ಯಾಂಕಿನಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ. ಇನ್ನೂ ಸರ್ಕಾರದ ಸಬ್ಸಿಡಿ ಯೋಜನೆಗಳು ಇನ್ಸೂರೆನ್ಸ್ ಕೂಡ ಮಾಡಲಾಗುತ್ತದೆ ಎಂದರು.

ಇನ್ನೂ ಬ್ರಾಂಚ್ ನ ವ್ಯವಸ್ಥಾಪಕರಾದ ಶಿವಪ್ರಸಾದ್ ನಾಡಗೌಡ ಮಾತನಾಡಿ, ನಮ್ಮ ಬ್ಯಾಂಕಿನಲ್ಲಿ ಕೇವಲ 350 ರೂಪಾಯಿ ಕೆಬಿಎಲ್ ಸುರಕ್ಷಾ ಅಪಘಾತ ವಿಮೆ ಮಾಡಿಸಿದ ಬಾಲರಾಜ್ ಎಂಬುವವರು ಕೇವಲ ವರ್ಷಕ್ಕೆ 350 ರೂ. ಕಟ್ಟಿದಂತ ಇವರು ಅಪಘಾತದಲ್ಲಿ ಮೃತಪಟ್ಟ ಅವರ ನಾಮಿನಿಯಾದ ತಾಯಿ ಕಮಲಮ್ಮ ಅವರಿಗೆ ಇಂದು 10 ಲಕ್ಷಗಳ ಅಪಘಾತ ವಿಮೆಯ ಚೆಕ್ಕ ನ್ನು ಹಸ್ತಾಂತರ ಮಾಡಲಾಗಿದೆ, ಇನ್ನೂ ಗ್ರಾಹಕರ ಸ್ನೇಹಿಯಾದ ಕರ್ಣಾಟಕ ಬ್ಯಾಂಕ್ ಹಲವು ಸೇವೆಗಳನ್ನು ಜನರ ಮನೆ ಬಾಗಿಲಿಗೆ ಹೊದಗಿಸಲಿದೆ
ಎಂದರು.

ಇದೇ ಸಂಧರ್ಭದಲ್ಲಿ ಬ್ಯಾಂಕಿನ ವ್ಯವಹಾರದ ಲೀಗಲ್ ವಕೀಲರಾದ ಕೆ.ಎಂ.ನಾಗರಾಜ್ ಮಾತನಾಡಿ, ಗ್ರಾಹಕರ ಅತ್ಯುತ್ತಮ ಬ್ಯಾಂಕ್ ಎಂದರೆ ಕರ್ನಾಟಕ ಬ್ಯಾಂಕ್, ಈ ಬ್ಯಾಂಕಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದು ಸಾರ್ವಜನಿಕರಿಂದ ಕೇಳಿದ್ದೆನೆ, ಗ್ರಾಹಕರು ಇದ್ದರೆ ಬ್ಯಾಂಕ್, ಬ್ಯಾಂಕ್ ಇದ್ದರೆ ಗ್ರಾಹಕರು ಆದರೆ ಕೆಲವು ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಸರಿಯಾದ ಸೌಲಭ್ಯ ಅಥವಾ ಮಾತನಾಡಿಸುವುದು ಕಷ್ಟ ಸಾಧ್ಯವಾಗಿದೆ ಆದರೆ ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಪ್ರತಿಯೊಬ್ಬರು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಆದ್ದರಿಂದ ಕರ್ನಾಟಕ ಬ್ಯಾಂಕ್ ಉತ್ತಮ ಮಟ್ಟದಲ್ಲಿ ವ್ಯವಹಾರ ವೈಹಿವಾಟು ನಡೆಸುವುದರ ಮೂಲಕ ಬ್ಯಾಂಕ್
ಮುಂಚೂಣಿಯಲ್ಲಿದೆ ಎಂದರು.

ಇನ್ನೂ ಇದೇ ಸಂದರ್ಭದಲ್ಲಿ ಉತ್ತಮವಾಗಿ ಗ್ರಾಹಕರಿಗೆ ಸೇವೆಯನ್ನು ಹೊದಗಿಸುವಂತಹ ಕರ್ನಾಟಕ ಬ್ಯಾಂಕ್ ಮೊಳಕಾಲ್ಮೂರು ತಾಲೂಕಿನಲ್ಲಿ ಇಲ್ಲದೆ ಇರುವುದರಿಂದ ಅತಿ ತುರ್ತಾಗಿ ಮೊಳಕಾಲ್ಮೂರು ತಾಲೂಕಿನಲ್ಲಿ ಕರ್ನಾಟಕ ಬ್ಯಾಂಕ್ ಶಾಖೆಯನ್ನು ತೆರೆಯಲು ರಿಜಿನಲ್ ಮ್ಯಾನೆಜರ್ ಪಂಚಮುಖಿಯವರಿಗೆ ಮನವಿ ಮಾಡಿಕೊಂಡರು.

ಇನ್ನೂ ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕರಾದ ಶಿವ ಪ್ರಸಾದ್ ನಾಡಗೌಡ, ಸಹಾಯಕ ಶಾಖಾ ವ್ಯವಸ್ಥಾಪಕರಾದ ಚರಣ್, ಶಶಿಕುಮಾರ್, ಮಂಜುನಾಥ್ , ರಾಘವೇಂದ್ರ, ಶಿವಪ್ರಸಾದ್, ಅರುಣ್, ಮುರುಳಿ ,ಮಹಾಲಕ್ಷ್ಮಿ ಹಾಗೂ ಬಜಾಜ್ ಫೈನಾನ್ಸ್ ಸಂದೀಪ್, ಇನ್ನಿತರೆ ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಪಾಲ್ಗೊಂಡಿದ್ದರು .

ಇದೇ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟ ಬಾಲರಾಜ್ ಎಂಬುವವರ ನಾಮಿನಿ ಪಡೆದ ತಾಯಿ ಕಮಲಮ್ಮ ಅವರಿಗೆ ಹತ್ತು ಲಕ್ಷ ರೂಪಾಯಿಗಳ ಅಪಘಾತ ವಿಮೆಯ ಚೆಕ್ ನ್ನು ವಿತರಿಸಿದರು.

About The Author

Namma Challakere Local News
error: Content is protected !!