“ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ ಕಾರ್ಯಕ್ರಮ”. ಚಳ್ಳಕೆರೆ:-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಅವರ ಶಿವನಗರದ ಜಿ.ವಿ.ಎಸ್ ನಿವಾಸದಲ್ಲಿ ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.ಈ ಪುಸ್ತಕ ಪ್ರವಚನಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ “ಸಾಮೂಹಿಕ ಶ್ರೀದೇವಿಸ್ತುತಿ ಪಠಣ” ಮತ್ತು “ವಿಶೇಷ ಭಜನಾ” ಕಾರ್ಯಕ್ರಮ ನಡೆಯಿತು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶಾಂತಮ್ಮ,ಶ್ರೀಮತಿ ಯಶೋಧಾ ಪ್ರಕಾಶ್,ಕೆ.ಎಸ್ ವೀಣಾ, ಯತೀಶ್ ಎಂ ಸಿದ್ದಾಪುರ, ವಿಜಯಲಕ್ಷ್ಮೀ, ರಶ್ಮಿ ರಮೇಶ್,ಶಾರದಾಮ್ಮ,ವಿಮಲ ನಾಗರಾಜ್,ವೀರಮ್ಮ,ಜಯಮ್ಮ, ಸಂಗೀತ, ಶೈಲಜ,ಕೃಷ್ಣವೇಣಿ, ಭಾಗವಹಿಸಿದ್ದರು.

