ಚಳ್ಳಕೆರೆ :
ಚಿತ್ರದುರ್ಗ: ಕರಡಿಹಾವಳಿ ತಪ್ಪಿಸಿ ಗಾಂಧಿನಗರ
ನಿವಾಸಿಗಳ ಆಗ್ರಹ
ಚಿತ್ರದುರ್ಗದ ಗಾಂಧಿನಗರ ಹಾಗೂ ಸುಲೋಚನಮ್ಮ
ಬಡಾವಣೆಗಳು ಸಮೀಪದ ಗುಡ್ಡಗಳಿಗೆ ಹೋಂದೊಕೊಂಡಿವೆ. ಈ
ಗುಡ್ಡಗಳಿಗೆ ಆಗಾಗ ಕರಡಿಗಳು ಆಹಾರಕ್ಕಾಗಿ ಬರುತ್ತಿದ್ದು, ಕರಡಿ
ಹಾವಳಿಯಿಂದ ಜನರು ಬೇಸತ್ತು ಹೋಗಿದ್ದಾರೆ.
ದಿನವೂ ಶಾಲೆಗಳಿಗೆ
ಮಕ್ಕಳು ಹೋಗಿ ಬರುತ್ತಾರೆ. ಮಹಿಳೆಯರು ಹಾಗೂ ಕೆಲಸಕ್ಕೆ
ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು
ಕರಡಿಗಳು ಇತ್ತ ಕಡೆ ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ
ಬಡಾವಣೆಗಳ ನಿವಾಸಿಗಳು ಒತ್ತಾಯಿಸಿದ್ದಾರೆ.

