ಚಳ್ಳಕೆರೆ :
ಮೊಳಕಾಲ್ಕೂರು: ಬಗರ್ ಹುಕುಂ ಸಾಗುವಳಿದಾರರ
ಸಮಸ್ಯೆ ಬಗೆಹರಿಸಿ
ಮೊಳಕಾಲೂರು ತಾಲೂಕಿನಲ್ಲಿ ಅರಣ್ಯ ಮತ್ತು ಕಂದಾಯ
ಜಮೀನಿನ ಗಡಿ ಗುರುತು ಮಾಡಬೇಕೆಂದು ಅಗ್ರಹಿಸಿ
ಸಿಪಿಐ ಪಕ್ಷದ ಜಿಲ್ಲಾ ಘಟಕ ಇಂದು ಪ್ರತಿಭಟನೆ ನಡೆಸಿತು.
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಹಿಸಿದ
ಪ್ರತಿಭಟನಾಕಾರರು ಗಡಿ ಗುರುತಿಸಿದ ಕಾರಣ, ತಾಲೂಕಿನ
ರಾಂಪುರ ಬಸಾಪುರ ದಡಗೂರು ವಡ್ಡರಹಳ್ಳಿಯಲ್ಲಿ ಅರಣ್ಯ ಹಕ್ಕು
ಅರ್ಜಿದಾರರು, ಮತ್ತು ಬಗರ್ ಹುಕುಂ ಫಲಾನುಭವಿಗಳು ಅತಂತ್ರ
ಸ್ಥಿತಿಯಲ್ಲಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು
ಆಗ್ರಹಿಸಿದರು.

