ನಗರದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೆಗೌಡರ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೆಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಮಾತನಾಡಿದ ಅವರು ಸರ್ಕಾರ ಮಹಾನ್ ನಾಯಕರುಗಳ ಜಯಂತಿ ಮಾಡುತ್ತದೆ ಎಂದರೆ ಮಹಾನ್ ನಾಯಕರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಉದ್ದೇಶವಾಗಿದೆ ಎಂದರು
ತಹಶಿಲ್ದಾರ್ ರೇಹಾನ್ ಪಾಷ ಮಾತನಾಡಿ ನಾಡ ಪ್ರಭು ಕೆಂಪೆಗೌಡ ಅವರು ಬೆಂಗಳೂರು ಕಟ್ಟಿದಂತ ನಾಯಕ, ಇಂತಹ ಮಹಾನ್ ನಾಯಕನ ಆದರ್ಶ, ತತ್ವಗಳನ್ನು ಈಗಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು, ರೈತ ಕುಟುಂಬದಲ್ಲಿ ಜನಿಸಿದರು, ಸರ್ವಧರ್ಧಗಳನ್ನು ಸಮಾನವಾಗಿ ಕಂಡು, ಎಲ್ಲಾ ಸಮಾಜದವರ ಅಭಿವೃದ್ಧಿಗೆ ಶ್ರಮಿಸಿದವರು ನಾಡ ಪ್ರಭು ಕೆಂಪೆಗೌಡರು ಎಂದು ಹೇಳಿದರು….
ನಗರಸಭೆ ಅಧ್ಯಕ್ಷೆ ಕವಿತಾ, ಮಾಜಿ ಅಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಸದಸ್ಯರಾದ ಶಿಲ್ಪಾ, , ಪೌರಾಲಯುಕ್ತ ಜಗರೆಡ್ಡಿ, ಇಓ ಶಶಿಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ವೀರಭದ್ರಪ್ಪ,
ಸಮಾಜದ ಮುಖಂಡರಾದ ಚನ್ನಕೇಶವಣ್ಣ, ಬೆಳಗೆರೆ ಚಂದ್ರಣ್ಣ, ಮಹಾಲಿಂಗಪ್ಪ ಇತರರು ಇದ್ದರು…

