ಚಳ್ಳಕೆರೆ : ಚಂದ್ರಯಾನ-3 ಯಶಸ್ವಿಯಾಗಲು ಚಳ್ಳಕೆರೆ ಪ್ರದೇಶದಲ್ಲಿ ಕಳೆದ ದಿನಗಳಲ್ಲಿ ನಡೆಸಿದ ಪ್ರಯೋಗಿಕ ಪರೀಕ್ಷೆಯೇ ಈ ಯಶಸ್ವಿ ಹಿಂದಿನ ಗುಟ್ಟಾಗಿದೆ ಎಂದು ವಿಜ್ಞಾನ ಶಿಕ್ಷಕರಾದ ನಾಗ ಅರುಣ್ ಹೇಳಿದರು.

ಅವರು ತಾಲೂಕಿನ ಮನ್ನೆಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಚಂದ್ರಯಾನ-3 ಯಶ್ವಿಸಿಯಾದ ಹಿನ್ನಲೆಯಲ್ಲಿ ಇಸ್ರೋ ಸಂಸ್ಥೆಗೆ ಅಭಿನಂದನೆ ಸಲ್ಲಿಸಿಲು ಮಕ್ಕಳ ಮ‌ೂಲಕ ಇಸ್ರೊ ಎಂಬ ಅಕ್ಷರ ಬಿಡಿಸುವ ಮೂಲಕ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ನಮ್ಮ ಚಳ್ಳಕೆರೆ ಭೂಮಿ ವಿಜ್ಞಾನಿಗಳ ತವರು ಭೂಮಿಯಾಗಿದೆ ಈಡೀ ದೇಶದಲ್ಲಿ ಹೊಸ ಆವಿಷ್ಕಾರ ಮಾಡುವುದು ಈ ನೆಲದಿಂದ ಇಂತಹ ನೆಲದಲ್ಲಿ ಜನಿಸಿದ ಮಕ್ಕಳು ವಿಜ್ಞಾನಿಯಾಗಬೇಕು ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಪಡೆಯಬೇಕು, ಶಾಲಾ ಅಂತಹದಿಂದ ನಮ್ಮ ಜ್ಞಾನವನ್ನು ವೃದ್ದಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಸೋಮಶೇಖರ್, ದಿವ್ಯ, ಮಮತಾ, ಮಂಜಮ್ಮ ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!