ಅಂಬೇಡ್ಕರ್ ಬೌಧ್ಧಧರ್ಮ ಸ್ವೀಕರಿಸಿದ ಸುದೀನ ಈದಿನ : ಬಿ.ಪಿ.ಪ್ರಕಾಶ್‌ಮೂರ್ತಿ

ಚಳ್ಳಕೆರೆ : ಹಿಂದೂ ಧರ್ಮವನ್ನು ತ್ಯಜಿಸಿ ಮೂಲ ಧರ್ಮವಾದ ಬೌದ್ದ ಧರ್ಮಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಮರಳಿದ ಈ ಸುದೀನ ನಾವೆಲ್ಲ ಆಚರಿಸಬೇಕಿದೆ ಎಂದು ಮಾಜಿ ಜಿಪಂ.ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ ಹೇಳಿದ್ದಾರೆ.
ಅವರು ನಗರದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳು ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾಮಾಲೆ ಹಾಕುವುದರ ಮೂಲಕ ಅ.14ರಂದು ಅಂಬೇಡ್ಕರ್ ಮೂಲ ಧರ್ಮವಾದ ಬೌಧ್ಧ ಧರ್ಮಕ್ಕೆ ಮರು ವಾಪಸ್ ಆದ ಅಂಬೇಡ್ಕರ್ ಬೌಧ್ಧಧರ್ಮ ಸ್ವೀಕರಿಸಿದ ಸುದೀನ ಈದಿನ : ಬಿ.ಪಿ.ಪ್ರಕಾಶ್‌ಮೂರ್ತಿ ರಂದು ರಾಷ್ಟಿçÃಯ ಸಮಾನತೆಯ ದಿನವಾಗಿ ಆಚರಣೆ ಮಾಡಿ ಮಾತನಾಡಿದರು.
ಅಂಬೇಡ್ಕರ್ ರವರು ಹಿಂದೂ ಧರ್ಮವನ್ನು ತ್ಯಜಿಸಿ ಐದು ಲಕ್ಷ ಅನುಯಾಯಿಗಳೊಂದಿಗೆ ಸಾಗಿದಯಾತ್ರೆಯಲ್ಲಿ ಬೌಧ್ದ ದರ್ಮವನ್ನು ಸ್ವೀಕರಿಸಿದ ಈ ದಿನವನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿವಾಗಿದೆ ಎಂದರು.
ನಗರಸಭೆ ಸದಸ್ಯ ಕೆ.ವಿರಭದ್ರಯ್ಯ ಮಾತನಾಡಿ, ಅಂಬೇಡ್ಕರ್ ಸಂಶೋಧನೆ ಮಾಡಿ ಮೂಲ ಧಮ್ಮ ಯಾವುದು ಎಂಬುದನ್ನು ಮನಗಂಡು ಮೂಲ ಧಮ್ಮವಾದ ಬೌದ್ಧ ಧರ್ಮಕ್ಕೆ ಮರಳಿದ ದಿನ ಈ ಸುದೀನ, ಹಿಂದೂವಾಗಿ ಹುಟ್ಟಿದ್ದೆನೆ ಆದರೆ ಹಿಂದೂವಾಗಿ ಸಾಯಲಾರೆ ಎಂದರು.
ದಲಿತ ಮುಖಂಡ ಉಮೇಶ್ ಚಂದ್ರ ಬ್ಯಾನರ್ಜಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಪ್ರಪಂಚಕAಡ ಮಹಾಜ್ಞಾನಿ ಹಿಂದೂ ಧರ್ಮಗಳಲ್ಲಿ ಇರುವ ತಾರತ್ಯಗಳಿಗೆ ಸಿಡಿದೆದ್ದು 1935ರಲ್ಲಿ ಸತತ ಇಪ್ಪೊಂದು ವರ್ಷಗಳ ಕಾಲ ಧರ್ಮಗಳ ಅಧ್ಯಯನ ಮಾಡಿ ನಂತರ ಬೌಧ್ಧ ಧರ್ಮಕ್ಕೆ ಸೇರರ್ಪಡೆಯಾದರು,
ಮಾಜಿ ಶಾಸಕ ಸುಧಾ ಸಾಲಿಂಗಯ್ಯ ಮಾತನಾಡಿ, ಬಾಬ ಸಾಹೇಬ ಅಂಬೇಡ್ಕರ್ ಅನುಯಾಯಿಗಳು ಈಡೀ ಪ್ರಪಂಚದಲ್ಲಿ ಅ.14ರಂದು 1954ರಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಸೇರರ್ಪಡೆ ಗೊಂಡು ಬೌದ್ದಧರ್ಮ ಪ್ರಚಾರ ಮಾಡುವುದು ಮೊದಲು ಧರ್ಮವನ್ನು ಅನುಸರಿಸಬೇಕು, ಅಂಬೇಡ್ಕರ್, ಪೆರಿಯಾರ್ ಹಾಗೂ ಬುದ್ಧ ಬೇಕು ಎಂಬುದು ಮೂರ್ತಿ ಪೂಜೆಯನ್ನು ಮಾಡುವ ಬದಲು ವ್ಯಕ್ತಿಗಳ ಆಚರಣೆಗಳನ್ನು ಅನುಸರಿಸಬೇಕು ಜೊತೆಗೆ ಆಚರಣೆಗೆ ತರಬೇಕು ಎಂದರು.
ದಲಿತ ಚಿಂತಕ ದ್ಯಾಮಯ್ಯ ಮಾತನಾಡಿ, ಬಾಬಾ ಸಾಹೇಬರು ಮತಾಂತರವಾದ ದಿನ ಇಂದು ಹಿಂದೂ ಧರ್ಮದಲ್ಲಿ ಯಾವುದೇ ಸಮಾನತೆ ಇಲ್ಲ ಹಿಂದುತ್ವ ಆಚರಿಸುವುದು ಹಿಂದೂ ಧರ್ಮ ಮಾತ್ರ ಆದ್ದರಿಂದ ಬಾಬ ಸಾಹೇಬರು ಹಿಂದೂ ಧರ್ಮವನು ಬಿಟ್ಟು ಮೂಲ ಧರ್ಮಕ್ಕೆ ಮರಳಿದ್ದಾರೆ ಎಂದರು.
ಈದೇ ಸಂಧರ್ಭದಲ್ಲಿ ಮಾಜಿ ಉಪಾಧ್ಯಕ್ಷ ಟಿ.ವಿಜಯ್ ಕುಮಾರ್, ಗಾಂಧಿನಗರದ ಅನಿಲ್, ತಾಪಂ.ಸದಸ್ಯ ಆಂಜನೇಯ, ಭಿಮಣ್ಣ, ವೆಂಕಟೇಶ್, ಹಳೆ ವೀರಭದ್ರ, ಬಿಎಸ್‌ಪಿ.ಪಕ್ಷದ ಪ್ರಕಾಶ್ , ನೆಲ್ಸ್ನ್‌ಆರ್ಟ್ಸ ಶ್ರೀನಿವಾಸ್, ಇತರರು ಇದ್ದರು.
ಪೊಟೋ ಚಳ್ಳಕೆರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಅ.14ರಂದು ಅಂಬೇಡ್ಕರ್ ಬೌಧ್ಧ ಧರ್ಮ ಸ್ವೀಕರಿಸಿದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾಮಾಲೆ ಹಾಕಿದರು.

Namma Challakere Local News
error: Content is protected !!