ಚಳ್ಳಕೆರೆ : ಅಕ್ರಮವಾಗಿ ಸೇಂಧಿ ಮಾರಾಟ ಮಾಡುವ ದಂಧೆಕೊರರನ್ನು ಎಡಮುರಿ ಕಟ್ಟಿದ ಅಬಕಾರಿ ಪೊಲೀಸರು.
ಹೌದು ಚಳ್ಳಕೆರೆ ತಾಲೂಕಿನಿಂದ ಅಕ್ರಮವಾಗಿ ಹೊರ ರಾಜ್ಯದ ಆಂಧ್ರ ಪ್ರದೇಶದಲ್ಲಿ ಸೇಂದಿ ಮಾರಾಟ ಮಾಡಲು, ಸೇಂದಿಯನ್ನು ಸಾಗಾಣಿಕೆ ಮಾಡುವಾಗ ವಾಹನ ಸಮೇತ ಯುವಕರು ಸಿಕ್ಕಿಬಿದ್ದಿದ್ದಾರೆ.
ಇನ್ನು ರಾಸಯಾನಿಕ ಪೌಡರ್ ಮಿಶ್ರಣ ಮಾಡಿ ಈ ವಿಷಕಾರಿಯಾದಂತ ಈ ಪೌಡರ್ ಮಾನವನಿಗೆ ಹಾನಿಯಾಗುವ ಸಂಭವವಿರುತ್ತದೆ, ಕರ್ನಾಟಕದಲ್ಲಿ ಸೇಂದಿ ಸಾಗಾಣಿಕೆ ಮತ್ತು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು ಯುವಕರು ಈ ಬಗ್ಗೆ ಜಾಗೃತರಾಗಬೇಕು ಎಂದು ಅಬಕಾರಿ ನಿರೀಕ್ಷಕರಾದ ಗಂಗರಾಜ್ ಹೇಳಿದ್ದಾರೆ.
ಇನ್ನೂ ಅಕ್ರಮ ಸೆಂಧಿ ಮಾರಾಟ ಮಾಡಲು ಹೊರರಾಜ್ಯಕ್ಕೆ ತೆರಳುತ್ತಿದ್ದ ಇಟಿಯಸ್ ಕಾರು, ಹಾಗೂ ಯುವಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

