ಚಿತ್ರದುರ್ಗ: ಅಕ್ರಮ ಮೈನಿಂಗ್ ಗೆ ಅರಣ್ಯಾಧಿಕಾರಿಗಳ
ಕುಮ್ಮಕ್ಕು
ಚಿತ್ರದುರ್ಗದ ಭೀಮಸಮುದ್ರದ ಗಣಿಭಾದಿತ ಪ್ರದೇಶಗಳಲ್ಲಿ ಔಷಧ
ಹಾಗೂ ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿಯಲಾಗುತ್ತಿದ್ದು,
ಇದರಲ್ಲಿ ಅರಣ್ಯಾಧಿಕಾರಿಗಳು ಅಕ್ರಮ ಗಣಿ ನಡೆಸುವವರ
ಜೊತೆ ಶಾಮೀಲಾಗಿ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು
ಭೀಮಸಮುದ್ರ ಗ್ರಾಪಂ ಉಪಾಧ್ಯಕ್ಷರು ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಮೈನಿಂಗ್ ಕಂಪನಿ ಹಾಗೂ ಅರಣ್ಯಾಧಿಕಾರಿಗಳ
ವಿರುದ್ಧ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ
ಮಾತನಾಡಿದ ಅವರು, ನಮ್ಮನ್ನು ಗಣಿ ಪ್ರದೇಶಕ್ಕೆ ಪ್ರವೇಶಿಸಲು
ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

