ಚಿತ್ರದುರ್ಗ: ಗೋ ಹತ್ಯೆ ಕಾಯ್ದೆ ಬದಲಾವಣೆ ಖಂಡಿಸಿ
ಪ್ರತಿಭಟನೆ
ರಾಜ್ಯ ಸರ್ಕಾರ ಗೋಸಾಗಾಣೆ ಮತ್ತು ಹತ್ಯೆಕಾಯ್ದೆಯಲ್ಲಿ ಯಾವುದೇ
ಕಾರಣಕ್ಕೂ ಬದಲಾವಣೆ ತರಬಾರದು ಎಂದು ಭಜರಂಗದಳ
ಪ್ರಾಂತ ಪ್ರಮುಖ್ ಪ್ರಭಂಜನ್ ಸೂರ್ಯ ಒತ್ತಾಯಿಸಿದ್ದಾರೆ.
ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿದ ಅವರು, ಕಳ್ಳರಿಗೆ
ಸಹಾಯ ಮಾಡುವಂತಹ ಬದಲಾವಣೆ ಬೇಡ. ಮೊದಲು ಇದ್ದಂತೆ
ಪ್ರತಿಬಂಧಕ ಆಜ್ಞೆ ಮುಂದುವರೆಯಬೇಕೆಂಬುದು ನಮ್ಮ ಆಗ್ರಹ
ಎಂದರು. ಇದರ ವಿರುದ್ಧ ರಾಜ್ಯಾದಾದ್ಯಂತ ಸೋಮವಾರ
ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.

