ಹೊಸದುರ್ಗ: ರಸ್ತೆಗಳ ಗುಂಡಿಮುಚ್ಚಲು ಸರ್ಕಾರದಲ್ಲಿ
ಹಣವಿಲ್ಲ
ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ರಸ್ತೆಯ ಗುಂಡಿಗಳನ್ನು ಮುಚ್ಚಲು ಸರ್ಕಾರದಲ್ಲಿ ಹಣವಿಲ್ಲದಿದ್ದರೂ,
ಭಾಗ್ಯಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಪ್ರಮುಖ ರಸ್ತೆಗಳ
ಗುಂಡಿಗಳನ್ನು ಮುಚ್ಚಲು ಟ್ರ್ಯಾಕ್ಟರ್ಗಳಲ್ಲಿ ಉಚಿತವಾಗಿ ಸಿಗುವ
ಕೆಮ್ಮಣ್ಣನ್ನು ತಂದು ಮುಚ್ಚುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

