ಹೊಸದುರ್ಗ: ಸಿಗಬೇಕಿದೆ ಕುರಿ ಮಾರುಕಟ್ಟೆಗೆ
ಕಾಯಕಲ್ಪ
ಹೊಸದುರ್ಗದ ಕುರಿ ಮಾರುಕಟ್ಟೆಗೆ ರಾಜ್ಯದ ನಾನಾ ಭಾಗಗಳಿಂದ
ಸಾವಿರಾರು ಕುರಿಗಳನ್ನು ವ್ಯಾಪಾರಕ್ಕೆ ತರಲಾಗುತ್ತದೆ. ಆದರೆ,
ಇಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಕುಡಿಯುವ ನೀರು,
ಕುಳಿತುಕೊಳ್ಳಲು ಸೂಕ್ತ ಆಶ್ರಯದಂತಹ ಮೂಲಭೂತ
ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಇದರಿಂದಾಗಿ
ಕುರಿ ವ್ಯಾಪಾರಿಗಳು ಪರಿತಪಿಸುವಂತಾಗಿದೆ. ದಿನವಿಡೀ ನಿಂತಿರುವ
ಮೂಕ ಪ್ರಾಣಿಗಳಿಗೆ ಕುಡಿಯುವ ನೀರು, ಮೇವು ಸಿಗುತ್ತಿಲ್ಲ ಎಂದು
ರೈತರು ಅಳಲು ತೋಡಿಕೊಂಡಿದ್ದಾರೆ.

