ಚಿತ್ರದುರ್ಗ: ಸಿಎಂ ಯಾರಾಗಬೇಕೆಂಬ ಬಗ್ಗೆ ಬಿಜೆಪಿಗೆ
ಆಸಕ್ತಿಯಿಲ್ಲ
ಯಾರು ಮುಖ್ಯಮಂತ್ರಿ ಆಗಬೇಕು, ಯಾರನ್ನು ಉಳಿಸಬೇಕು
ಎಂಬುದು ನಮ್ಮ ಕೆಲಸವಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ
ಬಿವೈ ವಿಜಯೇಂದ್ರ ಅವರು ಚಿತ್ರದುರ್ಗದಲ್ಲಿ ಬುಧವಾರ
ಹೇಳಿದ್ದಾರೆ. ಆಡಳಿತ ಪಕ್ಷದಲ್ಲಿ ಸಚಿವರು, ಶಾಸಕರು ದಿನ ಬೆಳಗ್ಗೆ
ಬಡಿದಾಡುತ್ತಿದ್ದಾರೆ. ರಾಜ್ಯದ ಜನತೆಗಾಗಲಿ, ಬಿಜೆಪಿಗಾಗಲಿ
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯುತ್ತಾರಾ
ಅಥವಾ ಅವರನ್ನು ಬದಲಾಯಿಸಲಾಗುತ್ತದೆಯೇ ಎಂಬ ಬಗ್ಗೆ
ಆಸಕ್ತಿ ಇಲ್ಲ ಎಂದರು. ರೈತರು ತಮ್ಮ ಸಂಕಷ್ಟಕ್ಕೆ ಸರ್ಕಾರ ನೆರವಿಗೆ
ಬರಬೇಕೆಂದು ಬಯಸುತ್ತಿದ್ದಾರೆ ಎಂದು ಅವರು ತಿಳಿಸಿದರು.

