ಚಳ್ಳಕೆರೆ: ನಿವೇಶನಕ್ಕಾಗಿ ಆಹೋರಾತ್ರಿ ಧರಣಿ ಎಚ್ಚರಿಕೆ
ನೀಡಿದ ಸಂದೇಶ್
ಚಳ್ಳಕೆರೆ ಗಂಜಿಗುಂಟೆ ಗ್ರಾಮದ 60 ದಲಿತ ಕುಟುಂಬಗಳಿಗೆ
ನಿವೇಶನ ಮಂಜೂರು ಮಾಡದ ಹಿನ್ನೆಲೆಯಲ್ಲಿ, ನ. 17 ರಂದು
ಜಿಲ್ಲಾಡಳಿತದ ವಿರುದ್ಧ ಗೋಮಾಳದಲ್ಲಿ ರಾತ್ರಿ-ಹಗಲು ಧರಣಿ
ನಡೆಸುವುದಾಗಿ ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಸಂದೇಶ್
ಎಚ್ಚರಿಕೆ ನೀಡಿದ್ದಾರೆ. ದಲಿತ ಕುಟುಂಬಗಳು ನಿವೇಶನಕ್ಕಾಗಿ
ನಿರಂತರವಾಗಿ ಪ್ರತಿಭಟನೆ ನಡೆಸುತ್ತಾ ಬಂದಿದ್ದರೂ, ಅಧಿಕಾರಿಗಳು
ಮತ್ತು ಜನಪ್ರತಿನಿಧಿಗಳು ನೀಡಿದ ಭರವಸೆಗಳು ಈಡೇರಿಲ್ಲ ಎಂದು
ಅವರು ಹೇಳಿದರು.

About The Author

Namma Challakere Local News
error: Content is protected !!