ಚಳ್ಳಕೆರೆ : ಹಾಲು ನೀಡುವ ರಾಸುಗಳ
ಮರಣ ಹೊಂದಿದಲ್ಲಿ ಶಿಮುಲ್ ಹಾಲು ಒಕ್ಕೂಟದಿಂದ ಮಾಲೀಕರಿಗೆ ಪರಿಹಾರ ನೀಡಲಾಗುತ್ತದೆ, ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಬಿಸಿ ಸಂಜೀವಮೂರ್ತಿ ಹೇಳಿದರು.
ಅವರು ನಗರದ ಬೆಂಗಳೂರು ರಸ್ತೆಯಲ್ಲಿ ಇರುವ
ಡಾ.ಕುರಿಯನ್ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಹಾರದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದರು.
ಹಾಲು ಉತ್ಪಾದಕರು ಅಕಾಲಿಕ ಮರಣಕ್ಕೆ ಹಸುಗಳು ಮರಣವೊಂದಿದಲ್ಲಿ ಶಿಮುಲ್ ನಿಂದ ಪರಿಹಾರ ಪಡೆಯಬಹುದು ಇನ್ನು ಹಾಲು ಹಾಕುವ ಸದಸ್ಯರು ಮರಣ ಹೊಂದಿದರೆ ಒಂದು ಲಕ್ಷದವರೆಗೆ ಪರಿಹಾರ ಸಿಗುತ್ತದೆ, ಅದಕ್ಕೆ ಹಾಲು ಹಾಕುವ ಸದಸ್ಯರು ಸಂಘದಲ್ಲಿ ಸದಸ್ಯತ್ವ ಹೊಂದಿದ್ದರೆ ಈ ಎಲ್ಲಾ ಸೌಲಭ್ಯ ಸಿಗುತ್ತದೆ,
ಹಸುಗಳಿಗೆ ವಿಮೆ, ಕಲ್ಯಾಣ ಟ್ರಸ್ಟ್ ನಿಂದ ಹಾಗೂ ಒಕ್ಕೂಟದ ದಿಂದ ರಿಯಾಯಿತಿಯಲ್ಲಿ ನೀಡಲಾಗುತ್ತದೆ, ಹಸುವಿನ ಮರಣ ಪರಿಹಾರ ಕೂಡ ನೀಡಲಾಗುತ್ತದೆ, ವಿಮೆ ಮಾಡಿಸಿದರೆ, ಹಾಲು ಉತ್ಪಾದಕರಿಗೆ ಸಹಾಯ ಮಾಡಿದಂತೆ ಹಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ
ಸಹಾಯಕ ವ್ಯವಸ್ಥಾಪಕರಾದ ಪುಟ್ಟರಾಜ , ಹಾಲು ಉತ್ಪಾದಕರ ಸದಸ್ಯ ಬಸವರಾಜ್, ಮೂರು ತಾಲೂಕಿನ ಹಾಲು ಒಕ್ಕೂಟದ ಸದಸ್ಯರು, ಹಾಗೂ
16 ಜನ ಫಲಾನುಭವಿಗಳಿಗೆ ಚೆಕ್ ವಿತರಿಸಿದರು.


