ಚಳ್ಳಕೆರೆ :
ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ 3ನೇ ವ್ಯಕ್ತಿ ಪ್ರವೇಶ:
ಶ್ರೀರಾಮುಲು ಸ್ಪೋಟಕ ಹೇಳಿಕೆ
ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ ಮೂರನೇ ವ್ಯಕ್ತಿ ಪ್ರವೇಶ
ಪಡೆದಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮಲು ಸ್ಫೋಟಕ
ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಕಲಬುರಗಿಯಲ್ಲಿ
ಮಾತನಾಡಿದ ಅವರು, ಈಗಾಗಲೇ ಸಿಎಂ ಹುದ್ದೆಗೆ ಸಿದ್ದರಾಮಯ್ಯ
ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಫೈಟ್ ನಡೆಯುತ್ತಿದೆ.
ತಮ್ಮ ಪುತ್ರನನ್ನು ಸಿಎಂ ಮಾಡೋಕೆ ಮಲ್ಲಿಕಾರ್ಜುನ್ ಖರ್ಗೆ
ಸರ್ಕಾರವನ್ನು ಬೀಳಿಸಲಿದ್ದಾರೆ. ಇಬ್ಬರ ಕಾದಾಟದಲ್ಲಿ ಖರ್ಗೆ
ಮಗನನ್ನು ಸಿಎಂ ಮಾಡೋಕೆ ಹೊರಟಿದ್ದಾರೆ ಎಂದರು.

