ಚಳ್ಳಕೆರೆ :
ಚಳ್ಳಕೆರೆ ತಾಲೂಕು ತೊರೆ ಬೀರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾದ ರಾಧಾಮಣಿ ರವರು ಇಂದು ಹೃದಯಘಾತದಿಂದ ನಿಧನ ಹೊಂದಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಬಿ.ಸಿ.ಸಂಜೀವ ಮೂರ್ತಿ ರವರು ಮರಣ ಹೊಂದಿದ ಕಾರ್ಯದರ್ಶಿಯವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿ ವೈಯಕ್ತಿಕವಾಗಿ 5,000 ಗಳನ್ನು ತಾತ್ಕಾಲಿಕ ಪರಿಹಾರವಾಗಿ ನೀಡಿದರು ಮತ್ತು ಒಕ್ಕೂಟದಿಂದ ಸಿಗುವ ಮರಣ ಪರಿಹಾರ ನಿಧಿಯನ್ನು ಕೊಡಿಸುವುದಾಗಿ ಕುಟುಂಬಕ್ಕೆ ಧೈರ್ಯವನ್ನು ತುಂಬಿ ಸಂತೈಸಿದರು.

