ಚಳ್ಳಕೆರೆ :
ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಸಾಮಾಜಿಕ ಹಾಗೂ
ಆರ್ಥಿಕವಾಗಿ ಸಬಲರಾಗುವಂತೆ ಸರ್ಕಾರದ ಅನೇಕ
ಯೋಜನೆಗಳಿದ್ದು ಅವುಗಳನ್ನು ಗ್ರಾಮೀಣ ಪ್ರದೇಶದ
ಜನರಿಗೆ ತಲುಪವಂತೆ ಮಾಡುವುದು ನಿಮ್ಮೆಲ್ಲರ
ಕರ್ತವ್ಯವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ
ಕಿವಿಮಾತು ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ
ಗ್ರಾಮೀಣ ಅಭಿವೃದ್ಧಿ ಆಯುಕ್ತಾಲಯ
ಪಂಚಾಯತರಾಜ್ ಇಲಾಖೆ, ಗ್ರಾಮಸ್ವರಾಜ್
ಅಭಿಯಾನ.ಜಿಲ್ಲಾ ಹಾಗೂ ತಾಲೂಕು ಪಂಚಾಯತ್
ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ ಅಡಿ
ಕಾಯಕ ಬಂಧುಗಳ (ಮೇಟ್ಸ್) ತರಬೇತಿ
ಮುಕ್ತಯಾಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ
ಮಾತನಾಡಿದರು.
ಈಗಾಗಲೆ ತರಬೇತಿ ಪಡೆದು ಕೊಂಡಿದ್ದು
ಗ್ರಾಮೀಣ ಭಾಗದಲ್ಲಿ ದೊಡ್ಡ ನಗರಗಳಿಗೆ ಜನರು ಗುಳೆ
ಹೋಗುವುದನ್ನು ತಡೆಗಟ್ಟುವುದೇ ಮನರೇಗಾ ಕಾಯ್ದೆಯ
ಉದ್ದೇಶವಾಗಿದೆ. ಪ್ರತಿ ಕುಟುಂಬಕ್ಕೆ 100 ದಿನಗಳ ಕೆಲಸ
ದೊರೆಯುತ್ತಿದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ
ಗ್ರಾಮೀಣ ಭಾಗದವರಿಗೆ ಈ ಕಾಯ್ದೆ ಸಹಕಾರಿಯಾಗಿದೆ.
ಸರ್ಕಾರ ಮೇಟಿಗಳಿಗೆ ತರಬೇತಿ ನೀಡಿದ್ದು ಗ್ರಾಮಗಳ
ಅಭಿವೃದ್ಧಿಯೇ ದೇಶದ ಅಭಿವೃದ್ಧಿ, ಆದ್ದರಿಂದ ಗ್ರಾಮೀಣ
ಭಾಗದಲ್ಲಿ ಅತಿ ಹೆಚ್ಚಾಗಿ ಮನರೇಗಾ ಕಾಮಗಾರಿ
ನಡೆಯಬೇಕಿದ್ದು, ಆಗಲೇ ಜಲಸಂಪನ್ಮೂಲ, ಅರಣ್ಯ, ಕೃಷಿ
ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಾಗ
ಕಾಯಕ ಬಂಧುಗಳು ಕರ್ತವ್ಯದಲ್ಲಿ ಮೋಸ ಮಾಡದೆ
ನಮ್ಮ ಭೂಮಿ, ನಮ್ಮ ಗ್ರಾಮ ಅಭಿವೃದ್ಧಿಯಾಗಲಿ ಎಂಬ
ಆಶಯದೊಂದಿಗೆ
ತಮ್ಮ ತಮ್ಮ ಗ್ರಾಮ ಪಂಚಾಯತಿ ಮಟ್ಟದಲ್ಲಿ ಉತ್ತಮ
ಕಾಯಕ ಬಂಧುಗಳಾಗಿ ಕಾರ್ಯನಿರ್ವಹಿಸಬೇಕೆಂದು
ಹೇಳಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಶಶಿಧರ್
ಮಾತನಾಡಿದರು. ತಾಲೂಕು ಗ್ಯಾರೆಂಟಿ ಅನುಷ್ಠಾನ
ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ನರೇಗಾ ಸಹಾಯಕ
ನಿರ್ದೇಶಕ ಸಂತೋಷ್, ಸಂಪತ್, ಕುಮಾರ್, ನಗರಸಭೆ ಸದಸ್ಯರು ಹಾಗೂ
ಕಾಯಕ ಬಂದುಗಳು ಉಪಸ್ಥಿತರಿದ್ದರು.

