ಚಳ್ಳಕೆರೆ :
ಚಿತ್ರದುರ್ಗ: ವರ್ಗಾವಣೆ ತೆಗೆದುಕೊಂಡು ಹೋಗಿ
ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನಗಳಲ್ಲಿ
ಮನೆಕಟ್ಟುವವರಿಂದ ಹಣ ವಸೂಲಿ ಮಾಡಲು ಟೆಂಡರ್
ಕೊಟ್ಟಿದ್ದೀರಾ, ಯಾರೋ ಕಾಂತರಾಜ್ ಕಡೆಯವರೆಂದು ಹೇಳಿ ಹಣ
ವಸೂಲಿ ಮಾಡುತ್ತಿದ್ದಾರೆಂದು ಸದಸ್ಯ ಶ್ರೀನಿವಾಸ್ ಪೌರಾಯುಕ್ತ
ರೇಣುಕಾ ವಿರುದ್ಧ ಆಕ್ರೋಶ ಹೊರ ಹಾಕಿದರು.
ಚಿತ್ರದುರ್ಗದ
ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಂದು ನಡೆದ ಸಭೆಯಲ್ಲಿ
ಮಾತಾಡಿ, ನೀವು ಪೌರಾಯುಕ್ತರಾಗಿ ಕೆಲಸ ಮಾಡಲು ನಿಮ್ಮಿಂದ
ಸಾಧ್ಯವಿಲ್ಲ. ಆದ್ದರಿಂದ ಈ ಕೂಡಲೇ ವರ್ಗಾವಣೆ ತೆಗೆದುಕೊಂಡು
ಬೇರೆಲ್ಲಾದರೂ ಹೋಗಿ ಎಂದರು.

