ಚಳ್ಳಕೆರೆ :
ಚಿತ್ರದುರ್ಗ: ಕಾಲ್ನಡಿಗೆ ಜಾಥ ಮುಂದೂಡಿದ ದಲಿತ
ಸಂಘಟನೆ
ಚಿತ್ರದುರ್ಗ ತಾಲ್ಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿ
ಹೊಸವರ್ಷದೊಂದು ಗ್ರಾಮದ ಕೆಲ ಹುಡುಗರು ಅಂಬೇಡ್ಕರ್
ಭಾವ ಚಿತ್ರದ ಭಾವುಟವನ್ನ ಸುಟ್ಟು ಬಾವಿಯಲ್ಲಿ ಎಸೆದಿದ್ದ ಘಟನೆ
ನಡೆದಿತ್ತು. ಈ ವಿಚಾರವನ್ನು ಚಿತ್ರದುರ್ಗ ಜಿಲ್ಲೆ ಹಲವು ದಲಿತ
ಸಂಘಟನೆಗಳು ಖಂಡಿಸಿದ್ದವು. ದಲಿತ ಸಂಘಟನೆಗಳ ಮಹಾ
ಒಕ್ಕೂಟ ದೇಶದ್ರೋಹದ ಪ್ರಕರಣ ವಿರೋಧಿಸಿ ಜನಜಾಗೃತಿ
ಕಾಲ್ನಡಿಗೆ ಜಾಥ ಹಮ್ಮಿಕೊಂಡಿತ್ತು. ಆದರೆ ಕೆಲವು ಕಾರಣದಿಂದಾಗಿ
ಜಾಥಾವನ್ನು ಮುಂದೂಡಲಾಗಿದೆ ಎಂದು ದಲಿತ ಮುಖಂಡ ಸಿ.ಕೆ
ಮಹೇಶ್ವರಪ್ಪ ಇಂದು ತಿಳಿಸಿದರು.

