ಚಳ್ಳಕೆರೆ :

ಬಸ್ ಕದ್ದೊಯ್ದ ಕಳ್ಳರು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಖಾಸಗಿ ಬಸ್‌ವೊಂದನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ
ಚಿತ್ರದುರ್ಗದಲ್ಲಿ ನಡೆದಿದೆ.

ನಾಯಕನಹಟ್ಟಿ ಮೂಲದ ಎಸ್‌ಆರ್
ಇ ಬಸ್ ಮಾಲೀಕ ಸಯ್ಯದ್ ಅನ್ವರ್ ಬಾಷಾ ಅವರಿಗೆ ಸೇರಿದ
ಬಸ್ ಕಳ್ಳತನವಾಗಿದ್ದು, ಈ ಬಸ್ ಚಿತ್ರದುರ್ಗ- ಚಳ್ಳಕೆರೆ- ಜಗಳೂರು
ಮಾರ್ಗದಲ್ಲಿ ಓಡಾಟ ನಡೆಸುತ್ತಿತ್ತು. ರಾತ್ರಿ ವೇಳೆ ಚಿತ್ರದುರ್ಗ
ಖಾಸಗಿ ಬಸ್ ನಿಲ್ದಾಣದಲ್ಲಿ ಇರುತ್ತಿತ್ತು.

ಇದನ್ನೇ ಹೊಂಚು ಹಾಕಿದ್ದ
ಖತರ್ನಾಕ್ ಕಳ್ಳರು, ಬಸ್ಸನ್ನೇ ಕದ್ದು ಎಸ್ಕೆಪ್ ಆಗಿದ್ದಾರೆ. ಬಸ್ ಕಳ್ಳರ
ಕಳ್ಳಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Namma Challakere Local News
error: Content is protected !!