ಚಳ್ಳಕೆರೆ : 2023ರ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷದ ಮುಖಂಡರು, ಸಂಭಾವ್ಯ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ಈಡೀ ಕ್ಷೇತ್ರದ ತುಂಬೆಲ್ಲಾ ಪ್ರದಕ್ಷಿಣೆ ಹಾಕುವುದು ಕಂಡು ಬರುತ್ತಿದೆ.
ಅದರಂತೆ ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಬೀಡು ಬಿಟ್ಟ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್‌ಕುಮಾರ್, ಕಳೆದ2018 ಚುನಾವಣೆಯಲ್ಲಿ ಕಡಿಮೆ ಅಂತರದಿAದ ಸೋಲನುಂಡ ಅವರು, ಈಡೀ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಪಡೆಯುವುದರ ಮೂಲಕ ಹೇಗಾದರೂ ಮಾಡಿ 2023ರ ಚುನಾವಣೆಯಲ್ಲಿ ಜೆಡಿಎಸ್‌ನ ತೆನೆ ಗಟ್ಟಿಗೊಳಿಸಬೇಕು ಎಂದು ಪಣತೊಟ್ಟ ಅವರು ಈಗಾಗಲೇ ಮತದಾರರ ಮನಸ್ಸಲ್ಲಿ ಮನೆ ಮಾಡಿದ್ದಾರೆ.
ಅದರಂತೆ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಮುಖಂಡ ವಿ.ವೈ ಪ್ರಮೋದ್, ಶ್ರೀನಿವಾಸ್ ಹಾಗೂ ಇತರರ ಸಾಥ್ ಪಡೆಯುವ ಮೂಲಕ ಈಡೀ ಕ್ಷೇತ್ರದಲ್ಲಿ ಪುಲ್ ರೌಂಡ್ಸ್ ಹೊಡೆಯುತ್ತಿದ್ದಾರೆ.
ಇನ್ನೂ ಕ್ಷೇತ್ರದಲ್ಲಿ ಎಲ್ಲೆ ಸಮಸ್ಯೆ ಕಂಡು ಬಂದರು ಅಲ್ಲಿ ಸಾರ್ವಜನಿಕರ ಪರವಾಗಿ ನಿಂತು ಅವರ ಕಷ್ಟಕ್ಕೆ ಸಂದ್ಪಿಸುವ ಮೂಲಕ ಕಣದಲ್ಲಿ ತಮ್ಮದೇ ಆದ ವರ್ಚಸ್ಸು ಮೂಲಕ ಓಡಾಡುತ್ತಿದ್ದಾರೆ. ಅದರಂತೆ ಕಾಂಗ್ರೇಸ್ ವಶದಲ್ಲಿರುವ ಕ್ಷೇತ್ರವನ್ನು ಮಣಿಸಲು ಕಾಂಗ್ರೇಸ್ ಮುಖಂಡರಿಗೆ ಮಣಿಹಾಕಿದ ಜೆಡಿಎಸ್ ಮುಖಂಡರು ತಮ್ಮ ಪಕ್ಷಕ್ಕೆ ಮುಖಂಡರನ್ನು ಸೇರಿಸಿಕೊಳ್ಳಲು ಹೊಂಚು ಹಾಕಿ ಜೆಡಿಎಸ್ ಪಕ್ಷಕ್ಕೆ ವಾರಕ್ಕೊಂದು ಹೋಬಳಿಯಂತೆ ಆಯ್ಕೆ ಮಾಡಿಕೊಂಡು ಪ್ರಮುಖ ಮುಖಂಡರನ್ನು ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನೂ ಅಭ್ಯರ್ಥಿ ಹುಡುಕಾಟದಲ್ಲಿ ಕಾಲ ಕಳೆಯುವ ಬಿಜೆಪಿ ಪಕ್ಷದಲ್ಲಿ ಯಾವುದೇ ಅಭ್ಯರ್ಥಿಯು ಗಟ್ಟಿಯಾಗಿ ನಿಲ್ಲದೆ ವರಿಷ್ಠರ ನಿಲುವಿನಂತೆ ಟಿಕೆಟ್ ಪಿಕ್ಸು ಮಾಡುವವರೆಗೂ ಕಾದು ನೊಡುವ ತಂತ್ರದಲ್ಲಿ ಕೆಲವು ಆಂಕಾಕ್ಷಿಗಳು ಬಲವಾಗಿ ನಿಲ್ಲದೆ ಕೇವಲ ಬಂದೇ ಪುಟ್ಟ ಹೋದೆ ಪುಟ್ಟ ಎಂಬ ಮಾತಿನಂತೆ ನಿದ್ರೆಯಲ್ಲಿದ್ದಾರೆ, ಇಂತಹ ಸಮಯವನ್ನು ಕಾಯುತ್ತಿರುವ ಜೆಡಿಎಸ್ ಮುಖಂಡರು ಸಂಘಟನೆಯನ್ನು ಬಲಗೊಳಿಸಲು ಇದೇ ಸದಾವಕಾಶವನ್ನು ಅಸ್ತçವನ್ನಾಗಿ ಬಳಸಿ ಕ್ಷೇತ್ರದ ಸುಮಾರು ಗ್ರಾಮಗಳಲ್ಲಿ ಬಿಜೆಪಿ ಮುಖಂಡರನ್ನು ಜೆಡಿಎಸ್ ತೆಕ್ಕೆಗೆ ಹಾಕಿಕೊಳ್ಳುತಿದ್ದಾರೆ.
ಈಗೇ ಈಡೀ ಕ್ಷೇತ್ರದ ನಾಲ್ಕು ಹೊಬಳಿಯಲ್ಲಿ ಮೊದಲನೇ ಹಂತದಲ್ಲಿ ಸೋಲನುಂಡ ಜೆಡಿಎಸ್ ಈ ಭಾರಿ ಗೆಲುವಿಗಾಗಿ ನಿದ್ರೆಯನ್ನು ತ್ಯಜಿಸಿದಂತಿದೆ ಎಂದು ಮತದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Namma Challakere Local News
error: Content is protected !!