ಚಳ್ಳಕೆರೆ :
ಚಿತ್ರದುರ್ಗ: ರಾಜಕೀಯ ಹೇಳಿಕೆ ನೀಡಿ ರೈತರ
ಭಾವನಾತ್ಮಕತೆ ಕೆರಳಿಸಬೇಡಿ
ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸುವ
ವಿಷಯದಲ್ಲಿ ಭಾರತೀಯ ರೈತ ಒಕ್ಕೂಟದ ದಾವಣಗೆರೆ ಜಿಲ್ಲೆ
ಪದಾಧಿಕಾರಿಗಳು ವಿರೋಧ ಮಾಡುತ್ತಿರುವುದನ್ನು ಚಿತ್ರದುರ್ಗ
ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ಖಂಡಿಸುತ್ತದೆ ಎಂದು ಸಮಿತಿ
ಮುಖಂಡರು ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿ, ರಾಜಕೀಯ ಪ್ರೇರಿತ ಹೇಳಿಕೆ ನೀಡಿ, ರೈತರನ್ನು
ಭಾವನಾತ್ಮಕತೆ ಕೆರಳಿಸುವ ಕೆಲಸ ಯಾರೂ ಮಾಡಬಾರದು.
ಭದ್ರಾ ಜಲಾಶಯದಲ್ಲಿ ನಮ್ಮ ನೀರನ್ನು ಪಡೆಯಲು ಯಾರ ಅಪ್ಪಣೆ
ಬೇಕಿಲ್ಲ ಎಂದರು.

