ಚಳ್ಳಕೆರೆ :
ಹೊಸದುರ್ಗ: ನೀರಿನ ಪಾಲು ಕೇಳಿದ ಹೊಸದುರ್ಗದ
ರೈತರು
ಹಿರಿಯೂರು ವಿವಿ ಸಾಗರ ಜಲಾಶಯವು ನೀರು ತುಂಬಿದ್ದರೂ,
ಜಲರಾಶಿಯನ್ನು ಹಿಡಿದಿಟ್ಟುಕೊಂಡಿದ್ದರಿಂದ ಹಿನ್ನೀರ ಪ್ರದೇಶದ
ಜನರಿಗೆ ನೀರು ಸಿಕ್ಕಿಲ್ಲ. ಜಲಾಶಯಕ್ಕೆ ಸಿಎಂ ಭೇಟಿ ನೀಡಿ ಬಾಗಿನ
ಅರ್ಪಿಸುವ ವೇಳೆ ಹೊಸದುರ್ಗದ ರೈತರು ನೀರಿನ ಪಾಲು
ಕೇಳಿದ್ದಾರೆ. ಜಲಾಶಯದ ಹಿನ್ನೀರಿನ ಪ್ರದೇಶವು 28 ಸಾವಿರ
ಹೆಕ್ಟೇರ್ ಇದ್ದು, ಅದು ಸಂಪೂರ್ಣವಾಗಿ ಹೊಸದುರ್ಗವನ್ನೇ
ಆವರಿಸಿಕೊಂಡಿದೆ. ಆದರೆ ಇಲ್ಲಿಯವರೆಗೂ ನಾವಾಗಲಿ,
ಸಾರ್ವಜನಿಕರಾಗಲಿ ಆ ನೀರು ಬಳಸಲು ಸಾಧ್ಯವಾಗಿಲ್ಲವೆಂದು ರೈತ
ಮುಖಂಡರು ಹೇಳುತ್ತಾರೆ.

