ಚಳ್ಳಕೆರೆ :
ಹಿರಿಯೂರು: ಅಕ್ರಮ ಕಾಂಪ್ಲೆಕ್ಸ್ ಕಟ್ಟಲು ನಕಲಿ ಖಾತೆ
ಸೃಷ್ಠಿ
ಹಿರಿಯೂರು ತಾಲೂಕು ಆಡಳಿತ ವ್ಯವಸ್ಥೆಯು ಅಸ್ತವ್ಯಸ್ಥಗೊಂಡಿದೆ,
ತಾಲೂಕು ಕಚೇರಿ ಪಕ್ಕದಲ್ಲಿ ನಿರ್ಮಾಣ ಮಾಡುತ್ತಿರುವ
ಕಟ್ಟಡಕ್ಕೆ ನಕಲಿಖಾತೆ ಸೃಷ್ಠಿಸಲಾಗಿದೆ ಎಂದು ರೈತ ಮುಖಂಡ
ಕೆಟಿ ತಿಪ್ಪೇಸ್ವಾಮಿ ಆರೋಪಿಸಿದರು. ಚಿತ್ರದುರ್ಗದಲ್ಲಿಂದು
ಮಾಧ್ಯಮಗಳೊಂದಿಗೆ ಮಾತಾಡಿ, ಹೋರಾಟ ಮಾಡಿದ ಮೇಲೆ
ಖಾತೆಯನ್ನು ವಜಾಗೊಳಿಸಿದ್ದಾರೆ. ಅಷ್ಟೆ ಅಲ್ಲ ನಕಲಿ ಖಾತೆ ಸೃಷ್ಠಿ
ಮಾಡಿದ ಅಧಿಕಾರಿಗಳನ್ನು ವಜಾಗೊಳಿಸಬೇಕು. ನಗರಸಭೆ
ವ್ಯಾಪ್ತಿಯಲ್ಲಾಗಿರುವ ಅಕ್ರಮ ರದ್ದುಪಡಿಸಿ, ಉತ್ತಮ ಆಡಳಿತ
ನೀಡಬೇಕು ಎಂದು ಹೇಳಿದರು.

