ಚಳ್ಳಕೆರೆ ನ್ಯೂಸ್ :

ಶಿಕ್ಷಣ ಇಲಾಖೆಯಲ್ಲಿ ತುಘಲಕ್ ದರ್ಬಾರ್
ನಡೆಯುತ್ತಿದೆ

ಶಿಕ್ಷಣ ಮಂತ್ರಿಗಳು ಹಾಗೂ ಇಲಾಖೆಯ ಗೊಂದಲದಿಂದಾಗಿ
ಶಿಕ್ಷಕರು ಮತ್ತು ಅಧಿಕಾರಿಗಳು ಹೈರಾಣಾಗಿದ್ದಾರೆ ಎಂದು ಅಗ್ನೆಯ
ಶಿಕ್ಷಕರ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿ
ಆರೋಪಿಸಿದರು.

ಅವರು ಚಿತ್ರದುರ್ಗದಲ್ಲಿ ಚುನಾವಣಾ ಪ್ರಚಾರ
ಸಭೆಯಲ್ಲಿ ಮಾತಾಡಿದರು.

ಇಲಾಖೆಯ ಗೊಂದಲಗಳಿಂದಾಗಿ
ಪೋಷಕರು ಕಂಗಾಲಾಗಿದ್ದಾರೆ.

ಶಿಕ್ಷಣ ಮಂತ್ರಿಗಳಿಗೆ ಶಿಕ್ಷಣದ
ಜ್ಞಾನವಿಲ್ಲ. ಇದರಿಂದ ತುಘಲಕ್ ದರ್ಬಾರ್ ನಡೆಯುತ್ತಿದೆ.

ಅಧಿಕಾರಿಗಳ ಮೇಲೆ ಹಿಡಿತವಿಲ್ಲದೆ, ದಿನಕ್ಕೊಂದು ಆದೇಶ
ಮಾಡುತ್ತಿದ್ದಾರೆಂದು ಹೇಳಿದರು.

Namma Challakere Local News

You missed

error: Content is protected !!