ಚಳ್ಳಕೆರೆ ನ್ಯೂಸ್ :
ದುಬಾರಿ ಶುಲ್ಕದಿಂದ ಬಡ ಮಕ್ಕಳು ಶಿಕ್ಷಣ
ವಂಚಿತರಾಗುತ್ತಿದ್ದಾರೆ
ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಶುಲ್ಕವನ್ನು ಶೇಕಡ 20ರಷ್ಟು
ಏರಿಕೆ ಮಾಡುತ್ತಿವೆ ಎಂದು ಆಮ್ ಆದ್ಮ ಪಕ್ಷದ ಜಿಲ್ಲಾ ಘಟಕದ
ಅಧ್ಯಕ್ಷ. ಬಿ ಇ ಜಗದೀಶ್ ಆರೋಪಿದರು.
ಅವರು ಚಿತ್ರದುರ್ಗದಲ್ಲಿ
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ದುಬಾರಿ ಶುಲ್ಕ ಪಾವತಿಸಿ
ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಬಡ ಮತ್ತು ಮಧ್ಯಮ ವರ್ಗದ
ಕುಟುಂಬಗಳಿಗೆ ಕಷ್ಟ ಸಾಧ್ಯವಾಗಿದೆ.
ಮಕ್ಕಳು ಶಿಕ್ಷಣದಿಂದ
ವಂಚಿತರಾಗುವ ಅಪಾಯ ಕೂಡ ಎದುರಾಗಿದೆ.
ಸರ್ಕಾರ ಕೂಡಲೇ
ಶುಲ್ಕದ ಹೊರೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.