ಚಳ್ಳಕೆರೆ ನ್ಯೂಸ್ :
ಬುದ್ಧನ ಉಪದೇಶಗಳು ಸಾಮಾನ್ಯ ಜನರಿಗೂ
ಮನಮುಟ್ಟುತ್ತಿತ್ತು
ಬುದ್ಧನು ದೊಡ್ಡದಾಗಿ ಉಪದೇಶವನ್ನು ಮಾಡದೆ ಸಣ್ಣ ಸಣ್ಣ
ವಿಚಾರಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿ ಸಮಾಜದಲ್ಲಿ
ಶಾಂತಿ, ಸಹ ಬಾಳ್ವೆಯ ಜೀವನ ನಡೆಸಲು ತನ್ನ ಬೋಧನೆಗಳ
ಮೂಲಕ ಕರೆ ನೀಡಿದ ಎಂದು ಪರಿಸರ ಕಾರ್ಯಕರ್ತ ಡಾ, ಎಚ್ ಆರ್
ಸ್ವಾಮಿ ಅಭಿಪ್ರಾಯ ಪಟ್ಟರು.
ಚಳ್ಳಕೆರೆ
ತಾಲೂಕಿನ ತ್ಯಾಗರಾಜ ನಗರದಲ್ಲಿ ಹುಣ್ಣಿಮೆ ಪ್ರಕಾಶನ ಮತ್ತು ಪ್ರೀತಿ
ಪುಸ್ತಕ ಪ್ರಕಾಶನ ಸಹಯೋಗದಲ್ಲಿ ಜಿ ವಿ ಆನಂದಮೂರ್ತಿರವರ
ಬುದ್ಧನ ಕಥೆಗಳು ಎಂಬ ಪುಸ್ತಕ ಬಿಡುಗಡೆಗೊಳಿಸಿ
ಮಾತನಾಡಿದರು.

