ಚಳ್ಳಕೆರೆ ನ್ಯೂಸ್ :

ನಿರ್ಭೀತಿಯಿಂದ ಮತದಾನ ಮಾಡಬೇಕು: ಸಿಇಒ
ಸೋಮಶೇಖರ್

ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇಕಡ 70 % ರಷ್ಟು
ಮತದಾನವಾಗಿದ್ದು, ಈ ಬಾರಿ ಶೇಕಡ 5% ರಷ್ಟು ಮತದಾನ
ಪ್ರಮಾಣ ಹೆಚ್ಚಿಸಲು, ಪ್ರತಿಯೊಬ್ಬರು ಮತದಾನ ಮಾಡಬೇಕೆನ್ನುವ
ಉದ್ದೇಶದಿಂದ ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮ
ಮಾಡಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು, ಜಿಲ್ಲಾ
ಪಂಚಾಯಿತಿ ಸಿಇಒ ಎಸ್ ಜೆ ಸೋಮಶೇಖರ್ ಹೇಳಿದರು.

ಅವರು
ಕೆಳಗೋಟೆ ಸಿ. ಕೆ ಪುರ ಬಡಾವಣೆ ಈಶ್ವರಿ ವಿಶ್ವವಿದ್ಯಾಲಯದಲ್ಲಿ
ಹಿರಿಯ ನಾಗರಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ
ಮಾತಾಡಿದರು.

Namma Challakere Local News
error: Content is protected !!