ಚಳ್ಳಕೆರೆ ನ್ಯೂಸ್ : ಏಪ್ರಿಲ್
5 ರಂದು ನಡೆಯುವ ಬಾಬು ಜಗಜೀವನ್ ರಾಮ್ ರವರ ಜಯಂತಿಯನ್ನು ಸರಳವಾಗಿ ‌ನೀತಿ ಸಂಹಿತೆಯೊಳಗೆ ಮಹಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.

ಅವರು ತಾಲೂಕು ಕಛೇರಿಯಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ರವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಲೋಕಸಭಾ ಚುನಾವಣೆಯ‌ ನೀತಿ ಸಂಹಿತೆ ಇರುವ ಕಾರಣ ಸರಳವಾಗಿ ಈ ಬಾರಿ ಜಯಂತಿ ಆಚರಿಸಲಾಗುತ್ತದೆ ಆದರೆ ಮಹಾತ್ಮರಿಗೆ ಯಾವುದೇ ರೀತಿಯಲ್ಲಿ ಗೌರವಕ್ಕೆ ದಕ್ಕೆ ಬಾರದ ರೀತಿಯಲ್ಲಿ ಪ್ರತಿಮೆಗೆ ಹೂವಿನ‌ ಮಾಲೆ ಅರ್ಪಿಸಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸುತ್ತವೆ ಎಂದರು.

ಇದೇ ಸಂಧರ್ಭದಲ್ಲಿ ಸಮಾಜಕಲ್ಯಾಣ ಇಲಾಖೆಯ ಸಹಯಾಕ‌ ನಿರ್ದೇಶಕ ದೇವ್ಲಾನಾಯ್ಕ್, ಮುಷ್ಟೂರಪ್ಪ, ಹಾಲಿಜಾನ್, ಕೃಷಿ ಅಧಿಕಾರಿ ಆರ್.ಅಶೋಕ್, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಪಶು ಇಲಾಖೆ ಡಾ.ರೇವಣ್ಣ, ಎಷ್ಟಿ ಇಲಾಖೆ‌ ದಿವಕಾರ್, ದಲಿತ ಸಮುದಾಯದ ಮೈತ್ರಿ ದ್ಯಾಮಯ್ಯ, ಗೊರ್ಲಕಟ್ಟೆ ನಾಗರಾಜ್, ದ್ಯಾಮರನಹಳ್ಳಿ‌,ಸುರೇಶ್, ಇತರರು ಭಾಗವಹಿಸಿದ್ದರು

Namma Challakere Local News
error: Content is protected !!