ಚಳ್ಳಕೆರೆ:
ಚಿತ್ರದುರ್ಗ: ಸಭೆಯಿಂದ ಹೊರ ನಡೆದ ಉಪಾಧ್ಯಕ್ಷೆ
ಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭೆಯಲ್ಲಿ ಅಧ್ಯಕ್ಷರ ಜೊತೆ
ಉಪಾಧ್ಯಕ್ಷೆ ಶ್ರೀದೇವಿ ಮಾತಿನ ಚಕಮಕಿ ಮಾಡಿ, ಸಭೆಯಿಂದ
ಹೊರ ನಡೆದ ಘಟನೆಯಿಂದು ನಗರಸಭೆಯಲ್ಲಿ ನಡೆಯಿತು.
ನಗರಸಭೆ ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಉಪಾಧ್ಯಕ್ಷೆ
ಶ್ರೀದೇವಿ ಮಾತಾಡಿ, ನನ್ನ ವಾರ್ಡಿನಲ್ಲಿ ಯಾವ ಅಭಿವೃದ್ಧಿ
ಕೆಲಸಗಳಾಗಿಲ್ಲ. ಯಾಕೆ ಮಾಡಿಲ್ಲ ನನ್ನ ವಾರ್ಡಿನಲ್ಲಿ ಮಲತಾಯಿ
ಧೋರಣೆ ಕಂಡು ಬರುತ್ತಿದೆ ಎಂದು ಹೊರಗೆ ಹೋಗುತ್ತಿದ್ದಂತೆ,
ಸಭೆಯಲ್ಲಿದ್ದ ಸದಸ್ಯರು ಹೋಗುವುದು ಬೇಡವೆಂದಾಗ ಅವರ
ಮೇಲೆ ಬೇಸರ ವ್ಯಕ್ತಪಡಿಸಿದರು.

