ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ಗೌರಸಮುದ್ರ ಮಾರಮ್ಮ ದೇವಿ ಸನ್ನಿಧಿಯಲ್ಲಿ ಇತ್ತಿಚೀಗೆ ನಡೆದ ಗುಗ್ಗರಿ ಹಬ್ಬವನ್ನು ಗ್ರಾಮದ ಭಕ್ತಾಧಿಗಳು ಸಂಭ್ರಮ ಸಡಗರಿಂದ ಆಚರಿಸಿದ್ದಾರೆ.
.
ಶ್ರೀ ಗೌರಸಮುದ್ರ ಮಾರಮ್ಮ ದೇವಿಯ ಗುಗ್ಗರಿ ಹಬ್ಬದ ಪ್ರಯುಕ್ತ ಸುತ್ತಮುತ್ತ ಗ್ರಾಮಸ್ಥರು ಮತ್ತು ಭಕ್ತಾದಿಗಳು ರೈತರು ತಮ್ಮ ಹೊಲಗಳಲ್ಲಿ ಬೆಳೆದಂತಹ ಬೆಳೆಗಳಲ್ಲಿ ತರಕಾರಿ, ಅಕ್ಕಿ, ಉರುಳಿ, ಸಾಂಬಾರ್ ಪದಾರ್ಥಗಳು. ಇನ್ನಿತರೆ ತರಕಾರಿಗಳು ಮತ್ತು ಸಿರಿಧಾನ್ಯಗಳನ್ನು ಮಂಗಳವಾರ ದೇವಿಗೆ ಅರ್ಪಿಸುವುದರಿಂದ ಮೂಲಕ
ಮಾರಮ್ಮ ದೇವಿಯ ಕೃಪಗೆ ಪಾತ್ರರಾಗಿದ್ದಾರೆ.
ಇನ್ನೂ ಭಕ್ತಾದಿಗಳು ಕೊಟ್ಟಂತಹ ತರಕಾರಿ ಮತ್ತು ಅಕ್ಕಿ ದೇವಸ್ಥಾನದಲ್ಲಿ ಪ್ರಸಾದ ಮಾಡಿ ಬೆಳಿಗ್ಗೆ ಪ್ರಸಾದ ವಿತರಣೆ ಮಾಡುತ್ತಾರೆ ಬಹು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ಓಬಣ್ಣ, ಹಾಗೂ ಸದಸ್ಯ ಶಶಿಕುಮಾರ್ ಹೇಳುತ್ತಾರೆ.

