ಚಳ್ಳಕೆರೆ :
ಚಿತ್ರದುರ್ಗ: ಕೋಟೆ ನಾಡಿನಲ್ಲಿ ವರುಣ ಸಿಂಚನ
ತಂಪಾದ ಇಳೆ
ಚಿತ್ರದುರ್ಗದಲ್ಲಿ ಇಂದು ಮಳೆ ಆಗಿದ್ದು, ಸುಮಾರು ಅರ್ಧ ಗಂಟೆಗೂ
ಹೆಚ್ಚು ಮಳೆ ಬಿದ್ದ ಕಾರಣ ನಗರದ ರಸ್ತೆಗಳು ಚರಂಡಿಗಳು ತುಂಬಿ
ಹರಿದವು. ಕೋಟೆ ನಾಡಿನ ಬಂಡೆಗಳ ಬಿಸಿಗೆ ಜನತೆ ಕಂಗೆಟ್ಟಿದ್ದರು.
ಆದರೆ ಇಂದು ಅರ್ಧ ಗಂಟೆಗೂ ಸುರಿದ ಮಳೆಯಿಂದಾಗಿ ತಣ್ಣನೆಯ
ವಾತಾವರಣ ಕಂಡ ಬಂತು. ರಣರಣ ಬೇಸಿಗೆ ಕಾಲದಲ್ಲಿ ಗುಡುಗು
ಸಹಿತ ಸುರಿದ ಮಳೆಯಿಂದಾಗಿ ಭೂಮಿ ತಂಪಾಗಿದ್ದು, ಮಳೆ
ಸಮಯದಲ್ಲಿ ಜನರು ಛತ್ರಿ ಆಸರೆ ಪಡೆದರು. ಆಟೋ ರಿಕ್ಷಾಗಳನ್ನು
ಬಳಸಿದ್ದು ಕಂಡು ಬಂತು.

