ಚಳ್ಳಕೆರೆ :
ಚಿತ್ರದುರ್ಗ: ಲೋಕಾಯುಕ್ತರಿಂದ ಆಸ್ಪತ್ರೆಗೆ ದಿಢೀರ್
ದಾಳಿ
ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಇಂದು ಲೋಕಾಯುಕ್ತರ
ತಂಡವು ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಸಂಪೂರ್ಣವಾಗಿ ಎಲ್ಲಾ ವಿಭಾಗಗಳು ವಾರ್ಡ್ಗಳು
ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿಯನ್ನು ಕೂಡ ಜಾಲಾಡಿದ್ದಾರೆ.
ಔಷಧ ಕೊಠಡಿಯಲ್ಲಿ ಅವಧಿ ಮೀರಿದ ಔಷಧಿ ಗಳನ್ನು ಕೂಡ
ಪರಿಶೀಲಿಸಿದ್ದಾರೆ. ನಂತರ ವಾರ್ಡ್ ಗಳಿಗೆ ಹೋದಾಗ ಅಲ್ಲಿನ
ರೋಗಿಗಳಿಂದ ಸರಿಯಾಗಿ ಚಿಕಿತ್ಸೆ ಹಾಗೂ ಮೆಡಿಸಿನ್ ಸಿಗುತ್ತಿದೆಯಾ
ಎಂದು ಮಾಹಿತಿ ಪಡೆದಿದ್ದಾರೆ.

