ಚಳ್ಳಕೆರೆ :
ಚಿತ್ರದುರ್ಗ: ಮಾಜಿ ಸಚಿವ ಆಂಜನೇಯಗೆ ಅದ್ದೂರಿ
ಸ್ವಾಗತ
ಚಿತ್ರದುರ್ಗದಲ್ಲಿ ಭಾನುವಾರ, ಒಳ ಮೀಸಲಾತಿಗಾಗಿ ಶ್ರಮಿಸಿದ
ಮಾಜಿ ಸಚಿವ ಹೆಚ್. ಆಂಜನೇಯ ಅವರನ್ನು ಮಾದಿಗ
ಸಮುದಾಯದವರು ಹೆಗಲ ಮೇಲೆ ಹೊತ್ತು ಮೆರೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿ
ಮಾಡಿ ಶೇ. 6 ರಷ್ಟು ನೀಡಿದ ನಂತರ, ಚಿತ್ರದುರ್ಗಕ್ಕೆ ಆಗಮಿಸಿದ
ಹೆಚ್. ಆಂಜನೇಯ ಅವರನ್ನು ಮಾದಿಗ ಸಮುದಾಯದವರು
ಅದ್ದೂರಿಯಾಗಿ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದರು.
ವೇದಿಕೆಗೆ ಆಗಮಿಸುವಾಗ ಜೆಸಿಬಿ ಯಂತ್ರಗಳ ಮೂಲಕ ಅವರ
ಮೇಲೆ ಪುಷ್ಪ ವೃಷ್ಠಿ ಮಾಡಲಾಯಿತು.

