ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಾಲಕ್ಕೆ ಸರಿಯಾಗಿ ಮಳೆ ಬಾರದೆ ರೈತರು ಇಟ್ಟ ಬೆಳೆ ನಷ್ಟವಾಗುತ್ತದೆ, ಈರುಳ್ಳಿ, ಶೇಂಗಾ, ದಾಳಿಂಬೆ ಬೆಳೆ ಈಗಾಗಲೇ ಮಳೆ ಇಲ್ಲದೆ ರೋಗಗಳಿಗೆ ತುತ್ತಾಗಿ ರೈತರು ಸಂಕಷ್ಟದಲ್ಲಿ ಇದ್ದಾರೆ ಆದ್ದರಿಂದ ಬೆಳೆ ಪರಿಹಾರ ನೀಡಲು ವರದಿ ಸಲ್ಲಿಸಬೇಕು ಎಂದರು.
ಈಗಾಗಲೇ ತಾಲ್ಲೂಕಿನಲ್ಲಿ 49 ಸಾವಿರ ಹೆಕ್ಟೇರ್ ಗೆ ಬೆಳೆ ನಷ್ಟ ಪರಿಹಾರಕ್ಕಾಗಿ ಸರಕಾರಕ್ಕೆ ವರದಿ ಕಳಿಸಲಾಗುತ್ತದೆ ಎಂದು ಕೃಷಿ ಅಧಿಕಾರಿ ಅಶೋಕ್ ಮಾಹಿತಿ ನೀಡಿದರು.
ಈಗ ಮಳೆ ಬಂದರು ಬೆಳೆ ಕಾಯಿ ಕಟ್ಟುವುದಿಲ್ಲ ರೈತರ ಜೀವನ ಹಸನು ಹಾಗುವುದಿಲ್ಲ. ಆದ್ದರಿಂದ ವರದಿ ಕಳಿಸಿ, ತೊಗರಿ, ಶೇಂಗಾ, 79ಸಾ.ಹೆಕ್ಟರ್ ಗುರಿ ಇತ್ತು 29ಸಾ. ಹೆಕ್ಟೇರ್ ಬಿತ್ತನೆ ಹಾಗಿದೆ,
ಮೆಕ್ಕೆಜೋಳ, 88520 ಹೆಕ್ಟೇರ್
27ಸಾ.ಹೆಕ್ಟೇರ್ , ಸರಕಾರಕ್ಕೆ ತಪ್ಪು ಮಾಹಿತಿ ನೀಡಿದೆ ನಿಖರ ವರದಿ ಕಳಿಸಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಇದೇ ಸಂಧರ್ಭದಲ್ಲಿ ಕೆಡಿಪಿ ನಾಮ ನಿರ್ದೇಶನ ಸದಸ್ಯ ವಿಶ್ವನಾಥ್, ಜಾಕೀರ್ ಹುಸೇನ್, ನೇತ್ರಾವತಿ, ಟಿ.ಬಸವರಾಜ್, ರಮೇಶ್, ಸುರೇಶ್ ಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೆಸ್ವಾಮಿ, ನಗರಸಭೆ ಅಧ್ಯಕ್ಷೆ ಶಿಲ್ಪ,
ತಹಶಿಲ್ದಾರ್ ರೇಹಾನ್ ಪಾಷ, ಚಿತ್ರದುರ್ಗ ತಹಶಿಲ್ದಾರ್ ಗಂಗಾಧರ್, ಇಓ, ಹೆಚ್.ಶಶಿಧರ್, ಚಿತ್ರದುರ್ಗ ಇಓ.ರವಿಕುಮಾರ್, ಪೌರಾಯುಕ್ತ ಜಗರೆಡ್ಡಿ, ಇತರರು ಇದ್ದರು.


