ಚಳ್ಳಕೆರೆ :
ನಾಯಕನಹಟ್ಟಿ ಪಟ್ಟಣದ ಪಟ್ಟಣ ಪಂಚಾಯತಿ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ
ನಾಯಕನಹಟ್ಟಿ:: ರಾಜ್ಯ ಸರ್ಕಾರ ಕೂಡಲೇ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಸರ್ಕಾರಿ ನೌಕರಿಗೆ ನೀಡುವ ಸೌಲಭ್ಯವನ್ನು ನೀಡಬೇಕು ಎಂದು ಸಮುದಾಯ ಸಂಘಟಕರು ನಾಗರತ್ನಮ್ಮ ತಿಳಿಸಿದರು.
ಮಂಗಳವಾರ ಪಟ್ಟಣದ ಪಟ್ಟಣ ಪಂಚಾಯತಿ ಕಚೇರಿಗೆ ಬೀಗ ಹಾಕಿ ಹೊರಗುತ್ತಿಗೆ ಖಾಯಂ ನೌಕರರು ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಸ್ಥಳೀಯ ಸಂಸ್ಥೆಯಲ್ಲಿ ಕೆಲಸ ಮಾಡುವ ಬಹಳ ಜನ ದಿನಗೂಲಿ ವೇತನದಲ್ಲಿ ಇದ್ದಾರೆ ಇವರನ್ನು ಖಾಯಂಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನವೇತನ ನೀಡಬೇಕು ಎಲ್ಲಾ ರಾಜ್ಯ ಸರ್ಕಾರದ ಎಲ್ಲಾ ನೌಕರಿಗೆ ಸಿಗುವ ಸೌಲಭ್ಯವೂ ಸ್ಥಳೀಯ ಸಂಸ್ಥೆಯಲ್ಲಿ ಕೆಲಸ ಮಾಡವರಿಗೆ ಎಸ್ ಎಪ್ ಸಿ ವೇತನ ಕೊಡಬೇಕೆಂದು
ಇದೇ ವೇಳೆ ದ್ವಿತೀಯ ದರ್ಜೆ ಸಹಾಯಕ ಟಿ ತಿಪ್ಪೇಸ್ವಾಮಿ. ಆರೋಗ್ಯ ನಿರೀಕ್ಷಕ ಕೆ.ವಿ ತಿಪ್ಪೇಶ್, ದ್ವಿತೀಯ ದರ್ಜೆ ಸಹಾಯಕ ಎಚ್. ಸುರೇಶ್, ಜೂನಿಯರ್ ಪ್ರೋಗ್ರಾಮ್ ದಯಾನಂದ್, ಅಕೌಂಟೆಂಟ್ ಜೆ ಮಧು, ಡಾಟಾ ಎಂಟ್ರಿ ಆಪರೇಟರ್ ಅಭಿಷೇಕ್, ನೀರು ಸರಬರಾಜು ಸಹಾಯಕ ಮನೋಜ್, ವಾಹನ ಚಾಲಕ ತಿಪ್ಪೇಶ್ ಸೇರಿದಂತೆ ಪೌರಕಾರ್ಮಿಕರು ಇದ್ದರು.

