ಚಳ್ಳಕೆರೆ :
ಚಿತ್ರದುರ್ಗ: ಬಂದ್ ಜೊತೆ ಆಡಳಿತ ಯಂತ್ರ
ನಿಷ್ಕ್ರಿಯೆಗೊಳಿಸುತ್ತೇವೆ
ನಮಗೆ ಒಳ ಮೀಸಲಾತಿ ಜಾರಿಯಲ್ಲಿ ಯಾವ ಪಕ್ಷಗಳ ಬಗ್ಗೆ
ವಿಶ್ವಾಸವಿಲ್ಲ. ನಾವು ಹೋರಾಟ ಮಾಡಿ ದಣಿದಿದ್ದೇವೆ.
ಆಗಸ್ಟ
ಒಂದರಿಂದ 15 ರೊಳಗೆ ರಾಜ್ಯ ಸರ್ಕಾರ ಒಳ ಮೀಸಲಾತಿ
ಜಾರಿಗೊಳಿಸದೇ ಹೋದರೆ, ರಾಜ್ಯದ ಬಂದ್ ಮಾಡುತ್ತೇವೆಂದು
ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.
ಚಿತ್ರದುರ್ಗದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,
ಆಡಳಿತ ಯಂತ್ರವನ್ನು ನಿಷ್ಕ್ರಿಯೆ ಮಾಡುವ ನಿಟ್ಟಿನಲ್ಲಿ, ಮಾದಿಗರ
ಹೋರಾಟ ಇರುತ್ತದೆ ಎಂದರು.

