ಚಳ್ಳಕೆರೆ :
ಹೊಸದುರ್ಗ: ಪೊಲೀಸರ ಪಥ ಸಂಚಲನ
ಹೊಸದುರ್ಗದ ವಿರಾಟ್ ಹಿಂದೂ ಮಹಾಸಾಗರ ಗಣಪತಿ
ಸಮಿತಿಯು ಅಯೋಧ್ಯ ಮಂಟಪದಲ್ಲಿ 13 ದಿನಗಳಿಂದ
ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಹಾಗೂ ಬೃಹತ್
ಶೋಭಾಯಾತ್ರೆ ಇಂದು ನಡೆಯಲಿದೆ. ವಿವಿಧ ಜಾನಪದ
ಕಲಾತಂಡಗಳೊಂದಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದ್ದು,
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್
ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ಮುನ್ನೆಚ್ಚರಿಕೆಯಾಗಿ
ಪೊಲೀಸರು ನಗರದ ಪ್ರಮುಖ ಬೀದಿಗಳಲ್ಲಿ ಬೆಳಗ್ಗೆ ಪಥ ಸಂಚಲನ
ನಡೆಸಿದರು.

