ಚಳ್ಳಕೆರೆ ತಾಲ್ಲೂಕು ಮೀರಾಸಾಬಿಹಳ್ಳಿ
ಗ್ರಾಮದಲ್ಲಿ ನಿರ್ಗತಿಕರಾದ ಗಂಗಮ್ಮ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ (ಬಿ. ಸಿ) ಟ್ರಸ್ಟ್ ಜ್ಞಾನವಿಕಾಸ ಯೋಜನೆ ಅಡಿಯಲ್ಲಿ ವಾತ್ಸಲ್ಯ ಮನೆಯನ್ನು ಗಂಗಮ್ಮ ರವರಿಗೆ ಹಸ್ತಾಂತರಿಸಲಾಯಿತು
ಇದೇ ಸಂಧರ್ಭದಲ್ಲಿ
ಚಳ್ಳಕೆರೆ ತಾಲೂಕಿನ ಎಂಎಸ್ ಹಳ್ಳಿ ವಲಯದ ಎಂಎಸ್ ಹಳ್ಳಿ ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯರಾದ ಗಂಗಮ್ಮನವರ ವಾತ್ಸಲ್ಯಮನೆಯ ಹಸ್ತಾಂತರವನ್ನು ಜಿಲ್ಲಾ ಜನಜಾಗೃತಿ ಸದಸ್ಯರಾದ ನೇತಾಜಿ ಪ್ರಸನ್ನ , ನಾಮಫಲಕ ಅನಾವರಣ ಮಾಡುವ ಮೂಲಕ ಚಾಲನೆ ನೀಡಿದರು.
ಗೌರವಾನ್ವಿತ ಜಿಲ್ಲಾ ನಿರ್ದೇಶಕರ ವಿನಯ್ ಕುಮಾರ್ , ಸುವರ್ಣ ಯೋಜನಾಧಿಕಾರಿಗಳು ಶಶಿಕಲಾ , ಗ್ರಾಮದ ಮುಖಂಡರಾದ ಸುರೇಶಣ್ಣ , ಒಕ್ಕೂಟದ ಅಧ್ಯಕ್ಷ ಚಂದ್ರಕಲಾ, ವಲಯ ಮೇಲ್ವಿಚಾರಕಿ ಗಂಗಮ್ಮ , ಸಮನ್ವಯಾಧಿಕಾರಿ ಭವಾನಿ , ಸೇವಾಪ್ರತಿನಿಧಿ ಲಕ್ಷ್ಮಿ ಸಂಘದ ಸದಸ್ಯರು ಹಾಜರಿದ್ದರು .

