ಚಳ್ಳಕೆರೆ :
ಹೊಸದುರ್ಗ: ರಾಗಿ ಬಿತ್ತನೆಗೆ ರೈತರಿಗೆ ಮತ್ತೆ ಹಿನ್ನೆಡೆ
ಹೊಸದುರ್ಗದಲ್ಲಿ ಕಳೆದ ಒಂದು ವಾರದಿಂದ ಎಡಬಿಡದೆ
ಸುರಿಯುತ್ತಿರುವ ಮಳೆಯಿಂದಾಗಿ ರಾಗಿ ಬಿತ್ತನೆಗೆ ಮತ್ತೆ
ಹಿನ್ನಡೆಯಾಗಿದೆ ಎಂದು ರೈತ ಮುಖಂಡ ಸಿದ್ಧವೀರಪ್ಪ ತಿಳಿಸಿದ್ದಾರೆ.
ರೈತರು ಜಮೀನು ಹದ ಮಾಡಿ ಬಿತ್ತನೆಗೆ ಕಾಯುತ್ತಿದ್ದರು.
ಆದರೆ ನಿರಂತರ ಮಳೆಯಿಂದಾಗಿ ಬಿತ್ತನೆಗೆ ಅವಕಾಶ
ಸಿಗದೆ ರೈತರು ಕಂಗಾಲಾಗಿದ್ದಾರೆ. ಅಲ್ಪಸ್ವಲ್ಪ ಸಿಕ್ಕ ಬೀಜ,
ರಸಗೊಬ್ಬರವನ್ನು ಖರೀದಿಸಿದ್ದರೂ, ಬಿತ್ತನೆ ಮಾಡಲಾಗದೆ ರೈತರು
ಸಂಕಷ್ಟಕ್ಕೀಡಾಗಿದ್ದಾರೆ.

