ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರ ದರೋಡೆಕೋರರಿಗೆ
ಪ್ರಿಯವಾಗಿದೆ
ಚಿತ್ರದುರ್ಗದಲ್ಲಿಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಭಜರಂಗದಳದ
ಪ್ರಾಂತ ಪ್ರಮುಖ್ ಪ್ರಭಂಜನ್ ಸೂರ್ಯ ಅವರು, ರಾಜ್ಯದ
ಕಾಂಗ್ರೆಸ್ ಸರ್ಕಾರ ಮುಸಲ್ಮಾನರಿಗೆ, ದರೋಡೆಕೋರರಿಗೆ
ಮತ್ತು ಕಳ್ಳ ಕಾಕರಿಗೆ ಅತ್ಯಂತ ಪ್ರಿಯವಾದ ಸರ್ಕಾರವಾಗಿದೆ
ಎಂದು ಕಿಡಿ ಕಾರಿದರು. ಆರಂಭದಿಂದಲೂ ಸರ್ಕಾರ ಮುಸ್ಲಿಂರ
ಓಲೈಸುತ್ತಿದೆ ಎಂದು ಆರೋಪಿಸಿದ ಅವರು, ಜಾನುವಾರು ಹತ್ಯೆ
ಮತ್ತು ಪ್ರತಿಬಂಧಕ ಕಾಯ್ದೆಯನ್ನು ಈ ಬಾರಿಯ ಅಧಿವೇಶನದಲ್ಲಿ
ಸಡಿಲಗೊಳಿಸುವ ಮುನ್ಸೂಚನೆ ಸಿಕ್ಕಿವೆ. ಯಾವುದೇ ಕಾರಣಕ್ಕೂ
ಈ ಕಾಯ್ದೆಯಲ್ಲಿ ಬದಲಾವಣೆಯಾಗಲಿ ಅಥವಾ ಸಡಿಲಿಕೆಯಾಗಲಿ
ಆಗಬಾರದೆಂದು ಅವರು ಆಗ್ರಹಿಸಿದರು.

