ಚಳ್ಳಕೆರೆ :
ಚಿತ್ರದುರ್ಗ: ನಮಗೆ ನ್ಯಾಯ ಕೊಡಬೇಕಾದ ಮನೆಗಳ
ಬಾಗಿಲು
ಮುಚ್ಚಿವೆ
ಮಂಗಳ ಮುಖಿಯರಿಗೆ ಕಟ್ಟಕಡೆಯ ಬಾಗಿಲುಗಳಾದ ಸರ್ಕಾರ
ನ್ಯಾಯಾಂಗ ಶಾಸಕಾಂಗ ಮತ್ತು ಕಾರ್ಯಾಂಗ, ಈ ಬಾಗಿಲುಗಳೆ
ನಮಗೆ ಮುಚ್ಚಿವೆ. ಈಗ ನಾವೇನು ಮಾಡಬೇಕು ಹೇಳಿ ಎಂದು
ಮಂಗಳ ಮುಖಿ ಭಾವನ ಅಸಹಾಯಕತೆಯಿಂದ ಹೇಳಿದರು.
ಚಿತ್ರದುರ್ಗದಲ್ಲಿಂದು ನಮ್ಮ ಚಳ್ಳಕೆರೆಯೊಂದಿಗೆ ಮಾತಾಡಿ,
ಸುಪ್ರೀನಮ್ ಕೋರ್ಟ್ ಆದೇಶ ಮಾಡಿದ್ದರೂ, ನಮ್ಮನ್ನು
ಸರ್ಕಾರಗಳು ಕಡೆಗಣಿಸುತ್ತಿವೆ. ಅದೇ ಜಾತಿ ಧರ್ಮಗಳ ವಿಷಯ
ಬಂದಾಗ ಸರ್ಕಾರ ಶೀಘ್ರವಾಗಿ ಪ್ರತಿಕ್ರಿಯಿಸುತ್ತದೆ ಎಂದರು.

