ಚಳಕೆರೆ ತಾಲೂಕು ನಗರಂಗೆರೆ ಪಂಚಾಯಿತಿಯ ನರಹರಿನಗರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಎಂ.ಪಿ.ಸಿ.ಎಸ್ ನ ಅಧ್ಯಕ್ಷರಾಗಿ ಕಾರ್ತಿಕ್ ಎಸ್ ಮೂರ್ತಿ
ಹಾಲಿ ಸಂಘದ ಸದಸ್ಯರಾಗಿದ್ದ ಕಾರ್ತಿಕ್ ಎಸ್. ಮೂರ್ತಿರವರು ಅವಿರೋಧವಾಗಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು ಉಪಾಧ್ಯಕ್ಷ ಸ್ಥಾನವನ್ನು ಸಂಘದ ಸದಸ್ಯರಾಗಿದ್ದ ಪಿ. ಶಿವಣ್ಣ ರಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಸಂತೋಷವನ್ನು ವ್ಯಕ್ತಪಡಿಸುವುದರ ಮೂಲಕ ಅಧ್ಯಕ್ಷ ಕಾರ್ತಿಕ್ ಎಸ್.ಮೂರ್ತಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಬಿ.ಸಿ. ಸಂಜೀವ್ ಮೂರ್ತಿರವರು ಹಾಗೂ ಮಾಜಿ ಉಪಾಧ್ಯಕ್ಷ ಎನ್. ವಿಶ್ವನಾಥ್ ಸದಸ್ಯರಾದ ಬಿ.ಆರ್. ಪುಷ್ಪ ಕೆ ಎಂ ಶಿಲ್ಪ.ಟಿ ಪುಷ್ಪ.ಜಯಲಕ್ಷ್ಮಿ ಟಿ ಗೀತಾ ಎನ್. ಮಾರುತಿ ಹಾಗೂ ಉಪಸ್ಥಿತರಿದ್ದರು.

