ಚಳ್ಳಕೆರೆ :
ಚಿತ್ರದುರ್ಗ: ಕೋಟೆ ನಾಡಿಗೆ ಎಂಟ್ರಿ ಕೊಟ್ಟ ಹಿಂದೂ
ಮಹಾ ಗಣಪತಿ
ಚಿತ್ರದುರ್ಗದಲ್ಲಿ ಭಜರಂಗದಳ ಮತ್ತು ವಿಹೆಚ್ ಪಿ ನೇತೃತ್ವದಲ್ಲಿ
ಹಿಂದೂ ಮಹಾಗಣಪತಿ ಹಬ್ಬದ ಸಂಭ್ರಮ ಆರಂಭವಾಗಿದೆ.
ಸೋಮವಾರ ತಡ ರಾತ್ರಿ 1 ಗಂಟೆಗೆ ಬಿಡಿ ರಸ್ತೆಯ ಭವ್ಯ
ಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬೃಹತ್ ಗಣಪತಿ ಮೂರ್ತಿ
ಆಗಮಿಸಿದೆ. ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ
ಮಠಕ್ಕೆ ತಲುಪಿದ ಗಣಪತಿಯನ್ನು ಆಯೋಜಕರು ಮತ್ತು ಭಕ್ತರು
ಸ್ವಾಗತಿಸಿದರು. ಮಂಗಳವಾರ ಅಧಿಕೃತವಾಗಿ ಸಂಪ್ರದಾಯದಂತೆ
ಪೂಜಾ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪನೆ ನಡೆಯಲಿದೆ.

