ಚಳ್ಳಕೆರೆ :
ಚಿತ್ರದುರ್ಗ: ಬಿಜೆಪಿ ವಿರುದ್ಧ ಎಚ್ಚರದಿಂದಿರಬೇಕು
ಚಿತ್ರದುರ್ಗ ಜಿಲ್ಲೆಯಲ್ಲಿ ನಮ್ಮ ಯುವ ಜನಾಂಗ ಪಂಚ ಗ್ಯಾರಂಟಿ
ಮನೆ, ಮನೆಗೆ ತಲುಪಿಸಿದ್ದಾರೆಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ
ಹೆಚ್ ಎಸ್ ಮಂಜುನಾಥ್ ಹೇಳಿದರು. ಚಿತ್ರದುರ್ಗದಲ್ಲಿಂದು
ನಡೆದ ಯುವ ಕಾಂಗ್ರೆಸ್ ಕಾರ್ಯ ಕಾರಿಣಿಯಲ್ಲಿ ಮಾತಾಡಿ, ಇಂದು
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಸಂವಿಧಾನ
ಬದಲಿಸುವ ಮಾತಾಡುತ್ತಿದೆ. ಜಾತಿ, ಧರ್ಮಗಳ ಮಧ್ಯೆ ಗಲಾಟೆ
ನಡೆಸುವ ಮೂಲಕ ರಾಜಕಾರಣ ಮಾಡುತ್ತಿದೆ. ಇದರ ಬಗ್ಗೆ ಯುವ
ಕಾಂಗ್ರೆಸ್ ಎಚ್ಚರದಿಂದ ಇರಬೇಕಿದೆ ಎಂದರು.

