ಚಳ್ಳಕೆರೆ :
ಹಿರಿಯೂರು: ಆಸ್ಪತ್ರೆಗೆ ಗ್ರಾಮಸ್ಥರಿಂದ ಬೀಗ ಜಡಿದು
ಪ್ರತಿಭಟನೆ
ಹಿರಿಯೂರಿನ ಜೆಜಿಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ
ವೈದ್ಯಾಧಿಕಾರಿ, ಸಕಾಲಕ್ಕೆ ಬಾರದ್ದಕ್ಕೆ ಆಕ್ರೋಶಗೊಂಡ
ರೋಗಿಗಳಿಂದು ಆಸ್ಪತ್ರೆ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ
ನಡೆಸಿದರು.
ವೈದ್ಯಾಧಿಕಾರಿ ಡಾ. ಕೃಷ್ಣ ನಿತ್ಯ ತುಮಕೂರಿನಿಂದ
ಬರುತ್ತಾರೆ. ತಮಗೆ ತಿಳಿದಂತೆ ಬರುತ್ತಾರೆ. ಅವರು ಬರದಿದ್ದರೆ
ಆಸ್ಪತ್ರೆ ಸಿಬ್ಬಂದಿಗೆ ರಜೆ.
ವೈದ್ಯ ಕರ್ತವ್ಯ ನಿರ್ಲಕ್ಷದ ಬಗ್ಗೆ ಹಿರಿಯ
ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲವೆಂದು
ಆಕ್ರೋಶ ವ್ಯಕ್ತಪಡಿಸಿದರು.

