ಚಳ್ಳಕೆರೆ : ತಾಲೂಕಿನ ಘಟಪರ್ತಿ ಗ್ರಾಮದ ಸಾರ್ವಜನಿಕ ಬಸ್ ತಂಗುದಾಣ ಶಿಥಿಲಗೊಂಡಿದ್ದು ಮೇಲ್ಚಾವಣಿಯ ಸರಳುಗಳು ಉದುರುತ್ತಿದ್ದು,
ಯಾವ ಸಂದರ್ಭದಲ್ಲಿ ಆದರೂ ಪ್ರಯಾಣಿಕರ ಮೇಲೆ ಬೀಳುವ ಸಂಭವವಿದೆ ಆದ್ದರಿಂದ ಸಂಬಂಧಪಟ್ಟ ಕ್ಷೇತ್ರದ ಶಾಸಕರು, ಸಚಿವರು ಇತ್ತ ಕಡೆ ಗಮನಹರಿಸಿ ನೂತನ ಬಸ್ ನಿಲ್ದಾಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮದ ಸಾರ್ವಜನಿಕರು ಒತ್ತಾಯಿಸಿದ್ದಾರೆ

